ದುರ್ಗದ ಆರೂ ಕ್ಷೇತ್ರ ಪಕ್ಷದ ಮಡಿಲಿಗೆ ಬರುವಂತಾಗಲಿ- ಸಚಿವ ಡಾ. ನಾರಾಯಣಗೌಡ
ಚಿತ್ರದುರ್ಗ, ಜು. 06-
ಜಿಲ್ಲೆಯಲ್ಲಿ ಪಕ್ಷ ಸಂಘಟನೆ ನೋಡಿದರೆ ಖುಷಿಯಾಗುತ್ತದೆ. ಎಲ್ಲ ಜಿಲ್ಲೆಯಲ್ಲಿಯೂ ಇದೇ ರೀತಿ ಪಕ್ಷ ಸಂಘಟನೆ ಆಗಬೇಕು. ಶಾಸಕರು, ಸಂಸದರು ಇಲ್ಲಿ ಜನರೊಂದಿಗೆ, ಕಾರ್ಯಕರ್ತರೊಂದಿಗೆ ಬೆರೆತು ಕೆಲಸ ಮಾಡುವ ಶೈಲಿ ಮಾದರಿಯಾಗಿದೆ. ತಿಪ್ಪಾರೆಡ್ಡಿಯಂತಹ ಹಿರಿಯರ ಅನುಭವದೊಂದಿಗೆ ಕಾರ್ಯಕರ್ತರು ಅತ್ಯುತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ಹೇಳಿದರು.
ಸಚಿವರು ಚಿತ್ರದುರ್ಗ ಜಿಲ್ಲಾ ಪ್ರವಾಸದ ವೇಳೆ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರ ಕುಂದು ಕೊರತೆ ಆಲಿಸಿ0 ದ ಸಚಿವರು, ಚಿತ್ರದುರ್ಗ ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಶೃದ್ಧೆ ಎಷ್ಟರ ಮಟ್ಟಿಗೆ ಇದೆ ಎನ್ನುವುದು ಕಳೆದ ಚುನಾವಣೆಯಲ್ಲಿ ಸ್ಪಷ್ಟವಾಗಿದೆ. ಇದೇ ರೀತಿಯ ಕಾರ್ಯಶೃದ್ಧೆ ಮುಂದೆಯೂ ಇರಲಿ, ಜಿಲ್ಲೆಯ ಆರೂ ಕ್ಷೇತ್ರವು ಬಿಜೆಪಿ ಮಡಿಲಿಗೆ ಬರುವಂತಾಗಲಿ ಎಂದು ಸಚಿವರು ಹೇಳಿದರು. ಹಿರಿಯ ಶಾಸಕ ತಿಪ್ಪಾರೆಡ್ಡಿ, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
[t4b-ticker]
+ There are no comments
Add yours