ತನಗಿರುವ ಕಾಯಿಲೆಯಿಂದ ಜಿಗುಪ್ಸೆಗೊಂಡು ಕ್ರಿಮಿನಾಶಕ ಸೇವಿಸಿ ವ್ಯಕ್ತಿಯ ಸಾವು

 

ಚಿತ್ರದುರ್ಗ ತಾಲ್ಲೂಕು ಟಗರನಹಟ್ಟಿ ಗ್ರಾಮದ ವಾಸಿ ಓಬಳೇಶ(೨೫) ಇವರಿಗೆ ೬ ತಿಂಗಳುಗಳಿAದ ಮೂಗಿನಲ್ಲಿ ದುರುಮಾಂಸ ಬೆಳೆದಿದ್ದು ಉಸಿರಾಟದ ಸಮಸ್ಯೆ ಇದ್ದು ಜೊತೆಗೆ ಹೊಟ್ಟೆನೋವು ಬರುತ್ತಿದ್ದು,

ಈ ಎರಡು ಸಮಸ್ಯೆಗಳಿಗೆ ಚಿತ್ರದುರ್ಗ ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರೂ ವಾಸಿಯಾಗಿರುವುದಿಲ್ಲ. ಹೀಗಿರುವಾಗ ಒಬಳೇಶನು ತನಗೆ ಇದ್ದ ಕಾಯಿಲೆಯಿಂದ

ಮಾನಸಿಕ ಖಿನ್ನತೆಗೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡು

ಜಮೀನಿನಲ್ಲಿರುವ ಗುಡಿಸಿನಲ್ಲಿದ್ದ ಯಾವುದೋ ಕ್ರಿಮಿನಾಶಕ ಔಷಧಿಯನ್ನು ಸೇವಿಸಿದ್ದು ಅಸ್ವಸ್ಥನಾಗಿದ್ದು, ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋದ ತಕ್ಷಣ ಓಬಳೇಶ ರವರು

ಮೃತಪಟ್ಟಿರುತ್ತಾರೆ. ಈ ಬಗ್ಗೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.

[t4b-ticker]

You May Also Like

More From Author

+ There are no comments

Add yours