ಚಿತ್ರ ನಟ ಸಂಚಾರಿ ವಿಜಯ್ ಗೆ ಅಪಘಾತ , ವೈದ್ಯರು ಬಿಚ್ಚಿಟ್ಟ ಸತ್ಯವೇನು.

 

 

ಬೆಂಗಳೂರು, ಜೂ.13. ಚಿತ್ರನಟ ಸಂಚಾರಿ ವಿಜಯ್ ಅವರಿಗೆ   ಬೈಕ್ ಅಪಘಾತ ಸಂಭವಿಸಿದ ಪರಿಣಾಮ ಗಂಭೀರ ಗಾಯಗಿಂಡಿದ್ದು, ವಿಜಯ್ ಅವರ ಸ್ಥಿತಿ ತುಂಬಾ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ರಾಷ್ಟ್ರ ಪ್ರಶಸ್ತಿ ವಿಜೇತ, ಕನ್ನಡದ ಖ್ಯಾತ ನಟ ಸಂಚಾರಿ ವಿಜಯ್ ಕೋವಿಡ್ ಸಂದರ್ಭದಲ್ಲಿ ಆಹಾರ ಕಿಟ್ ಗಳನದನ್ನು ನೀಡುತ್ತಿದ್ದರು ಎಂಬುದು ಸಹ ನೀನಾಸಂ ಸತೀಶ್ ತಿಳಿಸಿದ್ದಾರೆ. ಅಫಘಾತ ಹೇಗಾಯಿತು ಎಂದು ತಿಳಿದಿಲ್ಲ ಎಂದರು.

ಶನಿವಾರ ರಾತ್ರಿ ತನ್ನ ಸ್ನೇಹಿತನೊಂದಿಗೆ ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ಬೈಕ್ ಅಪಘಾತಕ್ಕೆ ಒಳಗಾಗಿದ್ದು, ಘಟನೆಯಲ್ಲಿ ಸಂಚಾರಿ ವಿಜಯ್ ರ ಕಾಲು ಮುರಿತಕ್ಕೆ ಒಳಗಾಗಿದ್ದು, ಮೆದುಳಿನಲ್ಲಿ ಹೆಚ್ಚಿನ  ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಮೆದುಳಿನ ಶಸ್ತ್ರಚಿಕಿತ್ಸೆ ನಡೆದಿದೆ. ಇದೀಗ ಅಪೋಲೊ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಲ್ಲ‌ ಮೂಲಗಳಿಂದ ತಿಳಿದಿದೆ.

 

ಸಂಚಾರಿ ವಿಜಯ್ ಬಗ್ಗೆ ವೈದ್ಯರು ಏನ್ ಹೇಳಿದರು.

ಆಸ್ಪತ್ರೆಗೆ ಬರುವಾಗಲೇ ಪರಿಸ್ಥಿತಿ ಬಹಳ ಗಂಭೀರವಾಗಿತ್ತು. ಮೆದುಳಿನ ಬಲ ಭಾಗದಲ್ಲಿ ರಕ್ತಸ್ರಾವ ಆಗಿದೆ. ಬಲ ತೊಡೆಯಲ್ಲಿ ಗಾಯವಾಗಿದೆ. ತಡರಾತ್ರಿಯೇ ಮೆದುಳಿನ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಆದರೆ ಪ್ರಾಣಾಪಾಯದಿಂದ ಪಾರು ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಮುಂದಿನ 24 ಗಂಟೆ ಕಾದು ನೋಡಬೇಕಿದೆ. ಸದ್ಯ ವೆಂಟಿಲೇಟರ್ ಸಹಾಯದಿಂದ ಇದ್ದಾರೆ. ಉಸಿರಾಟ ಮತ್ತು ಹೃದಯಬಡಿತದಲ್ಲಿ ವ್ಯತ್ಯಾಸವಾಗಿಲ್ಲ ಎಂದು ನ್ಯೂರೋ ಸರ್ಜನ್ ಡಾ ಅರುಣ್ ನಾಯಕ್ ಮಾಹಿತಿ ನೀಡಿದ್ದಾರೆ.

 

[t4b-ticker]

You May Also Like

More From Author

+ There are no comments

Add yours