ಕೆಲಸದಿಂದ ಅಮಾನತ್ತು ಮಾಡಿದ್ದಕ್ಕೆ ನೇಣು ಬಿಗಿದುಕೊಂಡು ಸಾವು.

 

ದಾವಣಗೆರೆ.ಜೂ.13;  ತಾಲೂಕಿನ  ಶ್ಯಾಗಲೆ  ಗ್ರಾಮದ  ಪ್ರಾಥಮಿಕ  ಕೃಷಿ ಪತ್ತಿನ ಸಹಕಾರ ಸಂಘದ  ಕಾರ್ಯದರ್ಶಿ ಕೆಲಸ ನಿರ್ವಹಿಸುತ್ತಿದ್ದ  ಬಿ.ಎನ್‌.ಚಂದ್ರಪ್ಪ  ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ.
ಸಾಯುವುದಕ್ಕಿಂದ ಮೊದಲು   ಪತ್ರ ಬರೆದಿಟ್ಟು ನೇಣುಹಾಕಿಕೊಂಡಿದ್ದಾರೆ.
ಕಳೆದ ಒಂದು ವರ್ಷದಿಂದ  ಅವರ  ಬರಬೇಕಾದ  ವೇತನ  ಕೊಟ್ಟಿಲ್ಲ. ಇದರಿಂದ  ಸಂಬಳ  ಮಂಜೂರು  ಮಾಡಲು  1 ಲಕ್ಷ ರೂಪಾಯಿ  ಸಹಕಾರ ಸಂಘಗಳ  ಕಚೇರಿಯಲ್ಲಿನ ಸಿಬ್ಬಂದಿಯೊಬ್ಬರು ಲಂಚ  ಕೇಳಿದ್ದರು. ಹೇಗೋ  ಹಣ ಹೊಂದಿಸಿ  20 ಸಾವಿರ ಕೊಟ್ಟರೂ  ಸಂಬಳ ಕೊಡದೆ  ಹಣ  ದುರ್ಬಳಕೆ
ಆರೋಪದ ಮೇಲೆ ಕೆಲವರ ಕುತಂತ್ರದಿಂದ‌  ನನ್ನನ್ನು  ಅಮಾನತ್ತು ಮಾಡಲಾಗಿದೆ. ಸಂಬಳವಿಲ್ಲದೆ  ಸಾಂಸಾರ ನಡೆಸುವುದು  ಕಷ್ಟ ವಾಗಿದ್ದು  ಬೇರೆ ದಾರಿ ಇಲ್ಲದೆ  ಆತ್ಮಹತ್ಯೆ ಮಾಡಿಕೊಂಡಿರುವುದಾಗಿ
ಪತ್ರದಲ್ಲಿ ಬರೆದಿದ್ದಾರೆ.

ನಾನು ಸೊಸೈಟಿ ಯಲ್ಲಿ ಯಾವುದೇ ಹಣವನ್ನು  ದುರುಪಯೋಗ ಮಾಡಿಲ್ಲ.ನಾನು ನಿರಾಪರಾಧಿ ಎಂದು  ಪತ್ರದಲ್ಲಿ ಬರೆದು ಸಹಿ ಮಾಡಿದ್ದಾರೆ.ಹದಡಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ  ದಾಖಲಾಗಿದೆ. ತನಿಖೆ ನಡೆಯುತ್ತಿದೆ.

[t4b-ticker]

You May Also Like

More From Author

+ There are no comments

Add yours