ಚಳ್ಳಕೆರೆ : ನಗರದ ಬಳ್ಳಾರಿ ರಸ್ತೆ ಪಾದಚಾರಿಯೊಬ್ಬರು ನಡೆದುಕೊಂಡು ಬರುವಾಗ ಲಾರಿ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಕಾಲು ಚಿದ್ರವಾಗಿ, ಚಿಕಿತ್ಸೆ ಫಲಕಾರಿಯಾಗದೆ ಉಸಿರು ಚೆಲ್ಲಿದ್ದಾರೆ.
ಪಾದಚಾರಿಯನ್ನು ಬುಡ್ನಹಟ್ಟಿ ಪಾಪಣ್ಣ ಎಂದು ಗುರುತಿಸಲಾಗಿದೆ ನಗರದ ಬಳ್ಳಾರಿ ರಸ್ತೆಯಲ್ಲಿ ನೆಹರು ಸರ್ಕಲ್ ಕಡೆ ಬುಡ್ನಹಟ್ಟಿ ಪಾಪಣ್ಣ ನಡೆದುಕೊಂಡು ಬರುತ್ತಿರುವಾಗ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಪಾಪಣ್ಣ ಕಾಲು ಚಿದ್ರ-ಚಿದ್ರ ವಾಗಿದೆ, ಆದರೂ ಜೀವ ಇತ್ತು, ಇನ್ನು ಪಾಪಣ್ಣ ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ ಹೆಚ್ಚಿನ ಚಿಕಿತ್ಸೆಗೆ ಚಿತ್ರದುರ್ಗಕ್ಕೆ ಸಾಗಿಸುವಾಗ ಪಾಪಣ್ಣ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ..
ಇನ್ನು ಚಳ್ಳಕೆರೆ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
[t4b-ticker]
+ There are no comments
Add yours