ಕಿಚ್ಚ ಸುದೀಪ್ ಗೆ ಕೇವಲ ನಟನೆಯಲ್ಲಿ ಮಾತ್ರ ಅಲ್ಲ ಕ್ರೀಡೆಯಲ್ಲೂ ಹೆಚ್ಚಿನ ಆಸಕ್ತಿ. ಇದೀಗ 1983ರಲ್ಲಿ ಭಾರತ ಗೆದ್ದ ವಿಶ್ವಕಪ್ ಗೆದ್ದ ಘಟನೆಯ ರೋಚಕ ಕ್ಷಣಗಳನ್ನು ಮುಂದಿಟ್ಟುಕೊಂಡು ತೆರೆಮೇಲೆ ಬರುತ್ತಿದೆ “83”.
ಈ ಚಿತ್ರವನ್ನು ಕರ್ನಾಟಕದಲ್ಲಿ ಕಿಚ್ಚ ಸುದೀಪ್ ಪ್ರಸ್ತುತಪಡಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕಪಿಲ್ ದೇವ್ ಅವರ ಪಾತ್ರದಲ್ಲಿ ನಟ ರಣ್ ವೀರ್ ಸಿಂಗ್ ನಟಿಸಿದ್ದಾರೆ. ಬಾಲ್ಯದಿಂದಲೂ ಕಪಿಲ್ ದೇವ್ ಅವರ ಕುರಿತು ಕಿಚ್ಚ ಸುದೀಪ್ ಅವರಿಗೆ ಅಪಾರವಾದ ಪ್ರೀತಿ, ಗೌರವ ಇತ್ತು. ಆದರೆ ಈವರೆಗೆ ಅವರ ಬಳಿ ಒಂದು ಫೋಟೋ ಕ್ಲಿಕ್ಕಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈಗ ಆ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಕಿಚ್ಚ ಸುದೀಪ್, ಈ ಚಿತ್ರಕ್ಕಾಗಿ 36 ವರ್ಷಗಳ ಕಾಲ ಕಾಯುತ್ತಿದ್ದೆ. ಧನ್ಯವಾದ ಕಪಿಲ್ ಸರ್. ನೀವು ನಮ್ರತೆಯ ಪ್ರತಿರೂಪ ಎಂದು ಬರೆದುಕೊಂಡಿದ್ದಾರೆ.
ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದಿ. ಈ ಇಬ್ಬರ ಕಾಂಬಿನೇಷನ್ ನೋಡಿ ಖುಷಿಯಾಗಿದ್ದಾರೆ.
[t4b-ticker]
+ There are no comments
Add yours