ಚಿತ್ರದುರ್ಗ:ವಿಶ್ವ ಮಾನವ (World Human School)ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆ(ರಿ) ರಜತ ಮಹೋತ್ಸವ ಮತ್ತು ಸಂವಿಧಾನ ದಿನದ ಅಂಗವಾಗಿ ದಿನಾಂಕ: ೨೬.೧೧.೨೦೨೩ ರಂದು ಮಹಿಳಾ ಮತ್ತು ಮಕ್ಕಳ ಕಾನೂನು ಅರಿವು ಕಾರ್ಯಕ್ರಮವನ್ನು ವಿಶ್ವಮಾನವ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಶ್ರೀಮತಿ ಹೆಚ್.ಆರ್. ಸುಧಾ, ಪ್ರಾಂಶುಪಾಲರು ವಹಿಸಿಕೊಂಡಿದ್ದರು.
ಇದನ್ನೂ ಓದಿ: ಸರ್ಕಾರಿ ನಿವೇಶನ ಮತ್ತು ಸೈಟ್ ಹಂಚಿಕೆಗೆ ಅರ್ಜಿ ಆಹ್ವಾನ,
ಮುಖ್ಯ ಅತಿಥಿಗಳಾಗಿ ಮಾಜಿ ನಗರಸಭಾ ಅಧ್ಯಕ್ಷರಾದ ಶ್ರೀಮತಿ ಸುನೀತ ಮಲ್ಲಿಕಾರ್ಜುನ, ಚಿತ್ರದುರ್ಗ ಜಿಲ್ಲಾ ಪಂಚಾಯತ್ ವ್ಯವಸ್ಥಾಪಕರಾದ ಕುಮಾರಿ ಸುಷ್ಮಾರಾಣಿ ಎಂ, ಯುವ ಬರಹಗಾರರಾದ ರಹಮತ್ ಉನ್ನೀಸಾ, ಡಾ. ರಕ್ಷಿತ, ಸಮುದಾಯ ಆರೋಗ್ಯಾಧಿಕಾರಿಗಳು ಕ್ಯಾಸಪುರ, ಕಾಲೇಜಿನ ಆಂಗ್ಲಭಾಷ ಉಪನ್ಯಾಸಕಿಯವರಾದ ಶ್ರೀಮತಿ ಶಿಲ್ಪ ಎಂ.ಎನ್, ವಕೀಲರಾದ ಕುಮಾರಿ ಪಂಕಜ ಎಸ್.ಎಸ್, ಶ್ರೀಮತಿ ದೀಪಾ ಎಂ, ಶೈಕ್ಷಣಿಕ ನಿರ್ವಾಹಕರು, ಪ್ರೌಢಶಾಲೆ ವಿಭಾಗ, ಕುಮಾರಿ ವೇದಾವತಿ ಎಂ.ಜಿ. ಶೈಕ್ಷಣಿಕ ನಿರ್ವಾಹಕರು, ಪ್ರಾಥಮಿಕ ವಿಭಾಗ. ಶ್ರೀಮತಿ ಕಾವ್ಯ, ಶಿಕ್ಷಕಿ ನಿರೂಪಿಸಿದರು. ಶ್ರೀಮತಿ ನಜ್ಮ ಸಹೇರ್ ಇವರು ಸ್ವಾಗತಿಸಿದರು. ಶ್ರೀಮತಿ ಸವಿತ ವಂದಿಸಿದರು. ಹಾಗೂ ಸಂಸ್ಥೆಯ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
[t4b-ticker]
+ There are no comments
Add yours