ರಾಜ್ಯ ಸುದ್ದಿ : ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಸುದ್ದಿ ಬೆನ್ನಲೇ ಹೊಸ ಅಧ್ಯಕ್ಷರ ರೇಸ್ ನಲ್ಲಿ ಮಂಗಳೂರು ಮೂಲದ ಪ್ರಭಾವಿ ಶಾಸಕ ಹಾಗೂ ಇಂಧನ ಸಚಿವ ಸುನೀಲ್ ಕುಮಾರ್ ಕೂಡ ರಾಜ್ಯಾಧ್ಯಕ್ಷರ ರೇಸ್ ನಲ್ಲಿದ್ದಾರೆ.
ಉತ್ತಮ ಇಮೇಜ್ ಹಾಗೂ ಖಡಕ್ ಆಡಳಿತದ ಅನುಭವದೊಂದಿಗೆ ಪಕ್ಷವನ್ನು ಮುನ್ನಡೆಸಲು ಸುನೀಲ್ ಕುಮಾರ್ ಆಸಕ್ತರಾಗಿದ್ದಾರಂತೆ. ಆದರೆ ಪಕ್ಷ ಮಾತ್ರ ಬಿಜೆಪಿಯ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಅರವಿಂದ್ ಲಿಂಬಾವಳಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆಮಾಡಲು ಆಸಕ್ತಿ ಹೊಂದಿದೆ. ಈಗಾಗಲೇ ಅಮಿತ್ ಶಾ ಎದುರು ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು ಲಿಂಬಾವಳಿ ಮುಂದಿನ ರಾಜ್ಯಾಧ್ಯಕ್ಷರಾಗಲಿದ್ದಾರೆ ಎನ್ನಲಾಗಿದೆ.
ಆದರೆ ಸದ್ಯಕ್ಕೆ ಇದನ್ನು ಬಹಿರಂಗ ಪಡಿಸಲು ಬಿಜೆಪಿ ಸಿದ್ಧವಿಲ್ಲ. ಎಲ್ಲಾವೂ ಅಮಿತ್ ಷಾ ನಿರ್ಧಾರಿಸಿದ್ದಾರೆ ಎಂಬ ಮಾಹಿತಿ ಇದೆ ಆದರೆ ರಾಜಕೀಯದಲ್ಲಿ ಏನು ಬೇಕಾದರು ಆಗಬಹುದು. ಎಲ್ಲವೂ ಮುಂದಿನ ದಿನದಲ್ಲಿ ನಿರ್ಧಾವಾಗಬೇಕಿದೆ.
[t4b-ticker]
+ There are no comments
Add yours