ರಾಜ್ಯದಲ್ಲಿ ವರ್ಗಾವಣೆ ಪರ್ವ ಶುರುವಾಗಿದೆ. ಸದ್ಯ ಜಿಲ್ಲಾಧಿಕಾರಿಗಖ ಎತ್ತಂಗಡಿ ಕಾರ್ಯ ಜೋರಾಗಿದೆ.
ಐವರು ಐಎಎಸ್ ಅಧಿಕಾರಿಗಳ ವರ್ಗಾವಣೆ
ಕೆ. ಶ್ರೀನಿವಾಸ್ ಸೇರಿದಂತೆ ರಾಜ್ಯ ಸರ್ಕಾರ ಇಂದು ಒಟ್ಟು ಐವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ವಾರದ ಹಿಂದಷ್ಟೇ ಗದಗ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿದ್ದ ಎಂ. ಸುಂದರೇಶ್ ಬಾಬು ಕೊಪ್ಪಳಕ್ಕೆ ಎತ್ತಂಗಡಿಯಾಗಿದ್ದಾರೆ.
ವರ್ಗಾವಣೆಯಾದ ಇತರರು: ತುಳಸಿ ಮದ್ದಿನೇನಿ- ಕಾರ್ಯದರ್ಶಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ; ಪಿ.ರಾಜೇಂದ್ರ ಚೋಳನ್- ವ್ಯವಸ್ಥಾಪಕ ನಿರ್ದೇಶಕ, ಬೆಂಗಳೂರು ಸ್ಮಾರ್ಟ್ ಸಿಟಿ; ಎನ್.ಎಂ.ನಾಗರಾಜ್- ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ; ರಾಹುಲ್ ರತ್ನಂ ಪಾಂಡೆ- ಪ್ರಧಾನ ವ್ಯವಸ್ಥಾಪಕ, ಯುಕೆಪಿ ಪುನರ್ವ್ಯವಸ್ಥೆ, ಪುನರ್ವಸತಿ ಮತ್ತು ಭೂಸ್ವಾಧಿನ ಯೋಜನೆ. ಸ್ಥಳ ನಿರೀಕ್ಷೆಯಲ್ಲಿದ್ದ ಮಹಾಂತೇಶ ಬೀಳಗಿ ಅವರನ್ನು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.
[t4b-ticker]
+ There are no comments
Add yours