ತಿಮ್ಮಣ್ಣನಾಯಕನ ಕೆರೆ ಏರಿ ಬಿರುಕು: ಸಾರ್ವಜನಿಕರು ಮುಂಜಾಗ್ರತೆ ವಹಿಸಲು ಸೂಚನೆ:ತಹಶೀಲ್ದಾರ್ ಸತ್ಯನಾರಾಯಣ

 

ಚಿತ್ರದುರ್ಗ ಅ.25(ಕರ್ನಾಟಕ ವಾರ್ತೆ):
ಚಿತ್ರದುರ್ಗ ತಾಲ್ಲೂಕಿನ ಗೊಡಬನಾಳ್ ಗ್ರಾಮದ ತಿಮ್ಮಣ್ಣನಾಯಕನ ಕೆರೆಯ ಏರಿಯು ಇತ್ತೀಚೆಗೆ ಬಂದಂತಹ ಭಾರೀ ಮಳೆಯಿಂದ ಬಿರುಕು ಬಿಟ್ಟಿದ್ದು, ಅಕ್ಕಪಕ್ಕದ ಜಮೀನುಗಳಿಗೆ ಕೆರೆ ನೀರು ನುಗ್ಗಿ, ಬೆಳೆಗಳು ಹಾನಿಗೊಳಗಾಗುವ ಸಂಭವವಿರುತ್ತದೆ.
ಕೆರೆಯ ನೀರಿ ಹರಿಯುವ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ವಾಸಿಸುವ ಜನರ ಆಸ್ತಿ-ಪಾಸ್ತಿ ಹಾಗೂ ಜಾನುವಾರುಗಳ ಸಂರಕ್ಷಣೆ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ಹಾಗೂ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಬೇಕು ಎಂದು ಚಿತ್ರದುರ್ಗ ತಾಲ್ಲೂಕಿನ ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ  ತಿಳಿಸಿದ್ದಾರೆ.
=======

[t4b-ticker]

You May Also Like

More From Author

+ There are no comments

Add yours