ಚಳ್ಳಕೆರೆ:ಅಂಗಡಿಯಲ್ಲಿ ಚಾಕಲೇಟ್ ಖರೀದಿ ಮಾಡುವ ಸೋಗಿನಲ್ಲಿ ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಮಹಿಳೆಯ ಬಂಗಾರದ ಸರ ಕಿತ್ತುಕೊಂಡು ಪರಾರಿಯಾದ ಘಟನೆ ಶನಿವಾರ ಬೆಳಿಗ್ಗೆ ಗಾಂಧಿನಗರದಲ್ಲಿ ನಡದಿದೆ.
ಗಾಂಧಿನಗರದ ಸತ್ಯಮ್ಮ ಅವರಿಗೆ ಸೇರಿದ ೭೫ ಸಾವಿರ ಮೌಲ್ಯದ ಬಂಗಾರದ ಸರ. ಸತ್ಯöಮ್ಮ ತಮ್ಮ ಮನೆಯ ಬಳಿರುವ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕ್ನಲ್ಲಿ ಬಂದಿದ್ದು, ಒಬ್ಬನು ಬೈಕ್ನಿಂದ ಇಳಿದು ಅಂಡಿಯಲ್ಲಿದ್ದ ಸತ್ಯಮ್ಮ ಅವರನ್ನು ಚಾಕಲೇಟ್ ಕೊಡು ಎಂದಾಗ ಅವರು ಚಾಕಲೇಟ್ ತೆಗೆದುಕೊಡುವಷ್ಟರಲ್ಲಿ ಅವರ ಕೊರಳಲ್ಲಿದ್ದ ಬಂಗಾರದ ಸರವನ್ನು ಕಿತ್ತುಕೊಂಡು ಬೈಕ್ ನಲ್ಲಿ ಪರಾರಿಯಾಗಿದ್ದಾರೆ.
ಇನ್ನು ಪ್ರಕರಣ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
=============================
[t4b-ticker]
+ There are no comments
Add yours