ಹಿರಿಯೂರು : ಹಿರಿಯೂರು ನಗರದ ಶಕ್ತಿ ದೇವತೆ ಶ್ರೀ ರಾಜಾ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಆಶಾಢ ಮಾಸದ ಮಂಗಳವಾರದ ಪ್ರಯುಕ್ತ ಇಂದು ಬೆಳಿಗ್ಗೆ ವಿಶೇಷ ಪೂಜೆ ಕಾರ್ಯಕ್ರಮ ನಡೆಯಿತು. ಇದರ ಅಂಗವಾಗಿ ಮಾತೆಗೆ ವಿಶೇಷವಾದ ಹೂವಿನ ಅಲಂಕಾರ ವಿವಿಧ ಘಮ ಘಮಿಸುವ ಹೂವುಗಳಿಂದ ನಿರ್ಮಿಸಿದ ಬೃಹದಾಕಾರವಾದ ಹೂವಿನ ಹಾರಗಳನ್ನು ಅರ್ಪಿಸಲಾಗಿತ್ತು ಮಾತೆಗೆ ಹೂವಿನ ಅಲಂಕಾರ ಮಾಡಿರುವುದು ಭಕ್ತಿ ಭಾವ ಹೊಮ್ಮುವಂತಿತ್ತು. ಅಷ್ಟೋತ್ತರ ಪೂಜೆ ಪುಷ್ಪಾರ್ಚನೆ ಮಹಾಮಂಗಳಾರತಿ ನಂತರ ನೆರೆದಿದ್ದ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಹಿರಿಯೂರು ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
[t4b-ticker]
+ There are no comments
Add yours