ರಾಜ್ಯದ ಚುನಾವಣೆ ದೇಶಕ್ಕೆ ದಿಕ್ಸೂಚಿ:ಜಗದೀಶ್ ಶೆಟ್ಟರ್

 

ಬೆಳಗಾವಿ:ಕರ್ನಾಟಕದ ಚುನಾವಣೆ ದೇಶದ ರಾಜಕೀಯಕ್ಕೆ ದಿಕ್ಸೂಚಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಈ ಸಂಬಂಧ ಸವದತ್ತಿಯಲ್ಲಿ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಹಮ್ಮಿಕೊಂಡಿದ್ದ ಮತದಾದರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ನಾಟಕದ ಚುನಾವಣೆ ಇಡೀ ದೇಶದ ರಾಜಕೀಯಕ್ಕೆ ದಿಕ್ಸೂಚಿಯಾಗಿದೆ.

ಬದಲಾವಣೆಯ ದಿಕ್ಸೂಚಿ ಕರ್ನಾಟಕದಿಂದ ಆಗಿದೆ. ವಿಧಾನಸಭೆ ಚುನಾವಣೆ ಫಲಿತಾಂಶ ಇಲ್ಲಿಗೆ ‌ನಿಲ್ಲುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸುತ್ತದೆ. ಬಿಜೆಪಿ ಮನೆಗೆ ಕಳುಹಿಸುವ ಕೆಲಸ ಆಗುತ್ತದೆ’

ವಿಧಾನಸಭೆ ಚುನಾವಣೆ ಸೆಮಿ ಫೈನಲ್ ಆಗಿತ್ತು. ಲೋಕಸಭೆ ಚುನಾವಣೆ ಫೈನಲ್ ಮ್ಯಾಚ್ ಆಗಿದೆ. ಫೈನಲ್‌ನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತದೆ. ಚುನಾವಣೆಯಲ್ಲಿ ಭರವಸೆ ಕೊಟ್ಟಿರುತ್ತೇವೆ ಎಷ್ಟೋ ಸಲ ಸರ್ಕಾರ ಬಂದು ಆರು ತಿಂಗಳಾದರೂ ಭರವಸೆಗಳು ಈಡೇರಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆದಿದೆ” ಎಂದು ತಿಳಿಸಿದರು.

[t4b-ticker]

You May Also Like

More From Author

+ There are no comments

Add yours