ಪರಶುರಾಂಪುರವನ್ನು ತಾಲೂಕು ಕೇಂದ್ರ ಮಾಡುವಂತೆ ಶಾಸಕ ಟಿ.ರಘುಮೂರ್ತಿ ಮನವಿ

 

ಚಿತ್ರದುರ್ಗ : ವಿಧಾನ ಸಭೆ ಕಲಾಪದಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿಯನ್ನು ತಾಲೂಕು ಕೇಂದ್ರ ಮಾಡಲೇಬೇಕು ಎಂದು ಚಳ್ಳಕೆರೆ ಕ್ಷೇತ್ರದ ಶಾಸಕ ಶಾಸಕ ಟಿ.ರಘುಮೂರ್ತಿ ಮುಖ್ಯಮಂತ್ರಿ ಮತ್ತು ಸಚಿವರಿಗೆ ಮನವಿ ಮಾಡಿದ್ದಾರೆ.

ನಾನು ಚಳ್ಳಕೆರೆ ವಿಧಾನಸಭೆ ಕ್ಷೇತ್ರದಿಂದ ಮೂರನೇ ಬಾರಿಗೆ ಶಾಸಕನಾಗುತ್ತಿದ್ದೇನೆ‌. ನಾನು ಹಲವು ಬಾರಿ ಪರಶುರಾಂಪುರ ತಾಲೂಕು ಮಾಡಬೇಕೆಂದು ಪಶ್ನೆಗಳು ಹಾಕಿದ್ದೇವೆ. ಸಚಿವರು ಜಿಲ್ಲಾಧಿಕಾರಿಗಳಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂಬ ಉತ್ತರಕ್ಕೆ ಸಚಿವರಿಗೆ ಮಾಹಿತಿ ಇಲ್ಲದೇ ಇರಬಹುದು ಎಂದ ಶಾಸಕರು 2008 ರಿಂದ 2013 ರ ಜಗದೀಶ್ ಶೆಟ್ಟರ್ ಸಿಎಂ ಆದಂತಹ ಬಿಜೆಪಿ ಸರ್ಕಾರದಲ್ಲಿ ಎಂ.ಪಿ‌.ಪ್ರಕಾಶ್ ವರದಿಯಲ್ಲಿ ಇರುವಂತೆ 43 ಹೊಸ ತಾಲೂಕು ಘೋಷಣೆ ಸಮಯದಲ್ಲಿ ಪರಶುರಾಂಪುರವನ್ನು ತಾಲೂಕು ಕೇಂದ್ರ ಮಾಡುತ್ತೇವೆ ಎಂದಿದ್ದರು. ಆದರೆ ರಾಜಕೀಯ ಬದಲಾವಣೆಯಿಂದ ಘೋಷಣೆ ಆಗಲಿಲ್ಲ. 2013 ರಿಂದ 2018 ರ ಸಿಎಂ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರದಲ್ಲಿ ಪರಶುರಾಂಪುರ ತಾಲೂಕು ಘೋಷಣೆ ಮಾಡಲು ಎಲ್ಲಾ ಸಿದ್ದತೆ ಮಾಡಲಾಗಿತ್ತು. ಆದರೆ ನಮ್ಮ ಕಾಂಗ್ರೆಸ್ ಪಕ್ಷದ ಅನೇಕ ಶಾಸಕರು ತಾಲೂಕು ಕೇಂದ್ರಕ್ಕೆ ಬೇಡಿಕೆ ಇಟ್ಟಿದ್ದರಿಂದ ತಾಲೂಕು ಘೋಷಣೆ ಕೈ ಬಿಡಲಾಯಿತು. ಈ ಬಾರಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವರು ಆದ್ಯತೆ ಮೇರೆಗೆ ಪರಶುರಾಂಪುರ ಹೋಬಳಿಯನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಲೇಬೇಕು ಎಂದು ಒತ್ತಾಯಿಸಿದರು.

ಒಂದು ವೇಳೆ ಪರಶುರಾಂಪುರ ತಾಲೂಕು ಕೇಂದ್ರ ಮಾಡದಿದ್ದರೆ 2028ರ ಬಳಿಕ ರಾಜಕೀಯದಲ್ಲಿ ನಾನು ಇರಲ್ಲ ಎಂಬ ಮಾತನ್ನು ವಿಧಾನಸಭೆಯಲ್ಲಿ ತಿಳಿಸುವ ಮೂಲಕ ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ಮಾಡಿದರು. ಇದಕ್ಕೆ ಉತ್ತರ ನೀಡಿರುವ ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಪರಶುರಾಂಪುರ ತಾಲೂಕು ಕೇಂದ್ರ ಮಾಡುವ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ.ಹೊಸದಾಗಿ 63 ತಾಲೂಕು ಕೇಂದ್ರ ಮಾಡಲಾಗಿದೆ.ಅದಕ್ಕೆ ಬೇಕಾದ ಸೌಲಭ್ಯ ಒದಗಿಸಿಲ್ಲ. ಹಲವು ತಾಲೂಕು ಕೇಂದ್ರ ಮಾಡಲು ಮನವಿ ಇದೆ.ಎಲ್ಲವನ್ನೂ ವೈಜ್ಞಾನಿಕ ಮಾನದಂಡ ರಚನೆ ಮಾಡಿ ತಾಲೂಕುಗಳನ್ನು ಘೋಷಣೆ ಮಾಡಲಾಗುತ್ತದೆ ಎಂದು ಶಾಸಕರ ಪ್ರಶ್ನೆಗೆ ಭರವಸೆ ನೀಡಿದರು.

ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಘೋಷಣೆ: ಶಾಸಕ ಟಿ.ರಘುಮೂರ್ತಿ ಅವರು ಪರಶುರಾಂಪುರ ತಾಲೂಕು ಕೇಂದ್ರ ಮಾಡಿಯೇ ಮಾಡುತ್ತೇನೆ. ಈ ಬಾರಿ ತಾಲೂಕು ಕೇಂದ್ರ ಮಾಡದಿದ್ದರೆ ನಾನು ಮತ್ತೆ 2028 ರ ನಂತರ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಸರ್ಕಾರ ಯಾವುದೇ ಬರಲಿ ಹೋರಟದ ಮೂಲಕ ತಾಲೂಕು ಕೇಂದ್ರ ಮಾಡುತ್ತೇನೆ ಎಂದು ಚುನಾವಣೆ ಪ್ರಚಾರ ಸಂದರ್ಭದಲ್ಲಿ ಜನರಿಗೆ ಅಭಯ ನೀಡಿದ್ದರು

ಬಾಕ್ಸ್.
ಚಳ್ಳಕೆರೆ ಕ್ಷೇತ್ರಕ್ಕೆ ಕಾಂಗ್ರೆಸ್ ಸರ್ಕಾರದಲ್ಲಿ ವಿಶೇಷ ಯೋಜನೆಗಳ ಮೂಲಕ ಅಭಿವೃದ್ಧಿಗೆ ಸಹಕಾರ ನೀಡಿದ್ದು ಸಿಎಂ ಸಿದ್ದರಾಮಯ್ಯ ಮತ್ತು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಾನು‌‌‌‌ ಕೊಟ್ಟ ಮಾತಿನಂತೆ
ಪರಶುರಾಂಪುರ ತಾಲೂಕು ಕೇಂದ್ರ ಮಾಡಲು ಸರ್ಕಾರದ ಮೇಲೆ ನಿರಂತರ ಒತ್ತಡ ತರುತ್ತೇನೆ. ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮತ್ತು ಕಂದಾಯ ಸಚಿವರು ನಮ್ಮ ತಾಲೂಕು ಕೇಂದ್ರದ ಬೇಡಿಕೆಯನ್ನು ಹಿಡೇರಿಸುವ ವಿಶ್ವಾಸ ನನಗಿದೆ.

ಟಿ.ರಘುಮೂರ್ತಿ
ಶಾಸಕರು ಚಳ್ಳಕೆರೆ ವಿಧಾನಸಭೆ ಕ್ಷೇತ್ರ

[t4b-ticker]

You May Also Like

More From Author

+ There are no comments

Add yours