ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂದು ಆಸೆ ಪಡುವವರಲ್ಲಿ ನಾನು ಒಬ್ಬ:ಸಚಿವ ಬಿ.ಶ್ರೀರಾಮುಲು ಅಚ್ಚರಿ‌ ಹೇಳಿಕೆ

 

ಬಳ್ಳಾರಿ:  ಭಗವಂತ ಅವಕಾಶ ಕೊಟ್ಟರೆ ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಲಿ ಎಂದು ಆಸೆ ಪಡುವ ವ್ಯಕ್ತಿಗಳಲ್ಲಿ ನಾನೂ ಒಬ್ಬ ಎಂದು ಸಚಿವ ಬಿ.ಶ್ರೀರಾಮುಲು ಎಲ್ಲರಿಗೂ ಕಣ್ಣು ಹುಬ್ಬೆರುವಂತೆ ಮಾಡಿದ್ದಾರೆ.

ಬಳ್ಳಾರಿ ನಗರದಲ್ಲಿ ಕುರುಬ ಸಂಘದ ವಾಣಿಜ್ಯ ಮಳಿಗೆ ಹಾಗೂ ವಿದ್ಯಾರ್ಥಿ ನಿಲಯ ಉದ್ಘಾಟಿಸಿ ಮಾತನಾಡಿದ ಶ್ರೀರಾಮುಲುಹಿಂದುಳಿದ ಸಮುದಾಯ ಎಂಬುದು ಬಂದಾಗ ನಾನು ಮತ್ತು ಸಿದ್ದರಾಮಯ್ಯ ಒಂದೇ ಎಂದು  ಪ್ರತಿಪಕ್ಷ ನಾಯಕನನ್ನು ಹಾಡಿ ಹೊಗಳಿದ್ದಾರೆ.ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಬೇಕು ಅನ್ನೋ ಆಸೆ ನನಗೂ ಇದೆ. ರಾಜಕೀಯಕ್ಕಾಗಿ ಮಾತನಾಡುತ್ತೇವೆ ಬಿಟ್ಟರೆ ನಾನು ಸಿಎಂ ಆಗಬೇಕು ಎಂಬ ಆಸೆ ಸಿದ್ದರಾಮಯ್ಯ ಅವರಿಗೂ ಇದೆ ಇಬ್ಬರು ಮುಂದೊಂದು ದಿನ ಒಂದೇ ವೇದಿಕೆಯಲ್ಲಿ ಇರುತ್ತೇವೆ ಎನ್ನುವ ಮೂಲಕ‌ ರಾಜಕೀಯದ ಬದಲಾವಣೆ ಗಾಳಿ ಇದೆ ಎಂಬ ಸುಳಿವನ್ನು ನೀಡಿದ್ದಾರೆ.

[t4b-ticker]

You May Also Like

More From Author

+ There are no comments

Add yours