ಭೀಕರ ಅಪಘಾತ ಏಳು ಜನ ಸಾವು

 

ವಿಜಯನಗರ; ವಿಜಯನಗರ (Vijayanagara)ಜಿಲ್ಲೆ ಹೊಸ ಪೇಟೆ ಬಳಿ ಭೀಕರ ಅಪಘಾತ ನಡೆದಿದೆ. ಎರಡು ಲಾರಿ ಹಾಗೂ ಕ್ರೂಸರ್‌ ನಡುವೆ ಡಿಕ್ಕಿ ಸಂಭವಿಸಿದ್ದು, ಕ್ರೂಸರ್‌ನಲ್ಲಿದ್ದ ಏಳು ಮಂದಿ ಸಾವನ್ನಪ್ಪಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಹೊಸಪೇಟೆ ಕಡೆಯಿಂದ ಚಿತ್ರದುರ್ಗ ಕಡೆಗೆ ತೆರಳುತ್ತಿದ್ದ ಟ್ರಕ್‌ನ ಸ್ಟಿಯರಿಂಗ್ ವಿಲ್‌ ತುಂಡಾಗಿ ಅದು ರಸ್ತೆ ವಿಭಜಕ ದಾಟಿಕೊಂಡು ಇನ್ನೊಂದು ಬದಿಯ ರಸ್ತೆಗೆ ನುಗ್ಗಿತ್ತು. ಅದೇ ವೇಳೆ ಹರಪನಹಳ್ಳಿ ಕಡೆಯಿಂದ ಹೊಸಪೇಟೆಯತ್ತ ಮಹೇಂದ್ರ ಎಸ್‌ಯುವಿ 300 ವಾಹನ ಬರುತ್ತಿತ್ತು. ಟ್ರಕ್‌ ಈ ವಾಹನಕ್ಕೆ ಗುದ್ದಿ ಮತ್ತೆ ಮುಂದಕ್ಕೆ ಹೋಗಿ ಗುಂಡಿಗೆ ಮಗುಚಿ ಬಿತ್ತು. ಇದೇ ವೇಳೆ ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಟಿಪ್ಪರ್ ಎಸ್‌ಯುವಿಗೆ ಡಿಕ್ಕಿ ಹೊಡೆಯಿತು. ಹೀಗಾಘಿ ಕಾರಿನಲ್ಲಿದ್ದ ಎಲ್ಲಾ ಏಳು ಮಂದಿ ಮೃತಪಟ್ಟರು.

ಇದನ್ನೂ ಓದಿ: ವಿವಿಧ ನಿಗಮಗಳಲ್ಲಿ ಸಾಲ‌ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಮೃತರೆಲ್ಲ ಹೊಸಪೇಟೆಯ ಉಕ್ಕಡಕೇರಿಯವರು. ಇವರು ಮಗುವಿನ ಜವಳ (ಕೂದಲು ತೆಗೆಸುವ ಶಾಸ್ತ್ರ) ಮಾಡಿಸುವ ಸಲುವಾಗಿ ಕುಟುಂಬ ಸಮೇತ ಹರಪನಹಳ್ಳಿ ತಾಲ್ಲೂಕಿನ ಕೂಲಳ್ಳಿ ದೇವಸ್ಥಾನಕ್ಕೆ ತೆರಳಿ ವಾಪಸ್‌ ಬರುತ್ತಿದ್ದರು.

ಮೃತಪಟ್ಟವರಲ್ಲಿ ಮೂವರು ಪುರುಷರು, ಮೂವರು ಮಹಿಳೆಯರು ಹಾಗೂ 5 ವರ್ಷದ ಹೆಣ್ಣು ಮಗು ಸೇರಿದೆ.

ಮೃತರನ್ನು ಕೆಂಚವ್ವ (60), ಭಾಗ್ಯಮ್ಮ (32), ಗೋಣಿಬಸಪ್ಪ (55), ಗಿರಿಜಾ (45), ಭೀಮಲಿಂಗಪ್ಪ (60), ಅನಿಲ್ (28) ಮತ್ತು ಈವನ್ (8) ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಎರಡೂ ಲಾರಿಗಳ ಚಾಲಕರಿಗೆ ಗಾಯವಾಗಿದ್ದು, ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಎಸ್‌ಪಿ ಶ್ರೀಹರಿಬಾಬು ಬಿ.ಎಲ್. ತೆರಳಿದ್ದು, ಹೆದ್ದಾರಿಯಲ್ಲಿ ಉಂಟಾಗಿದ್ದ ವಾಹನ ದಟ್ಟಣೆಯನ್ನು ನಿವಾರಿಸಲು ಕ್ರಮ ಕೈಗೊಂಡರು.

[t4b-ticker]

You May Also Like

More From Author

+ There are no comments

Add yours