ಬೆಳಗಾವಿ: ರಾಜ್ಯದಲ್ಲಿ ಪ್ರತಿಯೊಂದು ಜನಾಂಗಕ್ಕೆ ಒಂದಲ್ಲ ಒಂದು ಬೇಡಿಕೆಯನ್ನು ಜನಾಂಗದವರು ಸರ್ಕಾರದ ಮುಂದೆ ಹಿಡುವುದು ನಾವು ನೋಡಿದ್ದೇವೆ. ಕುಂದಾನಗರಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಈ ಸಂದರ್ಭದಲ್ಲಿ ಕರ್ನಾಟಕ ಮದ್ಯಪ್ರಿಯರು(alcoholics)ವಿಚಿತ್ರ ಹೋರಾಟ ಮೂಲಕ ಹಮ್ಮಿಕೊಳ್ಳುವ ಜೊತೆಗೆ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಇವರ ಬೇಡಿಕೆಗಳನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಲಿಸಿದ್ದಾರೆ.
ಮದ್ಯಪಾನ ಪ್ರಿಯರ ಹೋರಾಟ ಸಂಘವು ನಿತ್ಯ ದುಡಿ, ಸತ್ಯ ನುಡಿ, ಸ್ವಲ್ಪ ಕುಡಿ, ಮನೆಗೆ ನಡಿ ಎಂಬ ಹೋರಾಟ ಮಾಡಿದೆ. ಈ ವಿಚಿತ್ರ ಹೋರಾಟ ಕಂಡು ಒಂದು ರೀತಿಯಲ್ಲಿ ಶಾಕ್ ಆಗಿರುವ ಸಚಿವ ಸಂತೋಷ ಲಾಡ್ ಸರ್ಕಾರದ ಪರವಾಗಿ ಪ್ರತಿಭಟನಾಕಾರರ ಮನವಿ ಸ್ವೀಕಾರ ಮಾಡಲು ಬಂದಿದ್ದಾರೆ.
ಮದ್ಯಪ್ರಿಯರು ಸಂತೋಷ್ ಲಾಡ್ ಮುಂದೆ ರಾಜ್ಯ ಕುಡುಕರಿಗೆ ಆಗುತ್ತಿರುವ ಅನ್ಯಾಯ ಬಗ್ಗೆ ಅಳಲು ಎಳೆ ಎಳೆಯಾಗಿ ಸಮಸ್ಯೆಗಳ ಕುರಿತು ನೋವು ತೋಡಿಕೊಂಡಿದ್ದಾರೆ. ಅತ್ತ ಸಚಿವರು ಒಂದು ಕಡೆ ನಗಲಾರದೆ ಮತ್ತೊಂದು ಕಡೆ ಗಂಭೀರವಾಗಿ ಮನವಿ ಆಲಿಸಿದ್ದಾರೆ.
ಮದ್ಯಪ್ರಿಯರ ಬೇಡಿಕೆಗಳು
- ಡಿಸೆಂಬರ್ 31 ರಂದು ಮದ್ಯಪಾನ ದಿನಾಚರಣೆನ್ನಾಗಿ ಮಾಡಬೇಕು.
- ಅಂದು ಎಲ್ಲಾ ರೀತಿಯ ಬಾರ್ , ರೆಸ್ಟೋರೆಂಟ್ ನಲ್ಲಿ 50 ರಷ್ಟು ರಿಯಾಯಿತಿ ನೀಡಬೇಕು.
- ಕುಡುಕ ಎಂಬ ಪದಬಳಕೆ ನಿಷೇಧ ಮಾಡಬೇಕು.
- ಮದ್ಯಪಾನ ಪ್ರಿಯರ ಅಭಿವೃದ್ಧಿ ನಿಗಮ ಆರಂಭಿಸಿ ಹತ್ತರಷ್ಟು ಅನುದಾನ ನೀಡಬೇಕು.
- ಪ್ರತಿ ಬಾಟಲ್ ಗೆ ಇನ್ಸ್ಯೂರೆನ್ಸ್ ಮಾಡಬೇಕು.
- ಪ್ರತಿ ಬಾರ್ ಮುಂದೆ ಆಂಬುಲೆನ್ಸ್ ಸೇವೆ ನೀಡಬೇಕು.
- ಬಾರ್ ಪಕ್ಕದಲ್ಲಿ ಕುಡುಕರ ವಿಶ್ರಾಂತಿಗಾಗಿ ಭವನ ನಿರ್ಮಾಣ ಮಾಡಬೇಕು.
ಇದನ್ನೂ ಓದಿ:40 ಸಾವಿರ ಲಂಚ ಪಡೆಯುವಾಗ ಪಿಡಿಓ ಸೇರಿ ಇಬ್ಬರು ಲೋಕಯುಕ್ತ ಬಲೆಗೆ
ಈ ಎಲ್ಲಾವನ್ನೂ ಗಮನದಲ್ಲಿಟ್ಟುಕೊಂಡು ಕುಡುಕರ ಸಂಘ ಬೇಡಿಕೆಗಳು ಇಟ್ಟಿದ್ದಾರೆ. ಸದ್ಯ ಮದ್ಯಪಾನ ಪ್ರಿಯರು ಬೇಡಿಕೆಗಳು ಎಲ್ಲರಿಗೂ ಅಚ್ಚರಿ ತಂದಿದೆ.
[t4b-ticker]
+ There are no comments
Add yours