ವೇದಾವತಿ ನದಿ ತುಂಬಿ ಹರಿಯುತ್ತಿದ್ದು ನದಿ ಪಾತ್ರದ ಜನರು ಎಚ್ಚರಿಕೆಯಿಂದ ಬದುಕಬೇಕು: ತಹಶೀಲ್ದಾರ್ ಎನ್.ರಘುಮೂರ್ತಿ ಸೂಚನೆ

 

ಚಳ್ಳಕೆರೆ: ತಾಲೂಕು ಪರಶುರಾಂಪುರ ಹೋಬಳಿ ಚೌಳೂರು ಗ್ರಾಮದ ಕುಮಾರ ಬಿನ್ ಭೀಮಣ್ಣ 35 ವರ್ಷ ಇವರು ತುಂಬಿ ಹರಿಯುತ್ತಿರುವ ವೇದಾವತಿ ನದಿಯಲ್ಲಿ ಪ್ರವಾಹದ ಸೆಳೆತದಿಂದ ನದಿಗೆ ಬಿದ್ದು ಸಾವುಗೆ  ಹೀಡಾಗಿದ್ದು ಈ  ಘಟನೆ ನಡೆದಿದೆ.

ಈ  ಸುದ್ದಿ ತಿಳಿದ ತಕ್ಷಣ ಚಳ್ಳಕೆರೆ ತಹಶೀಲ್ದಾರ್  ಎನ್. ರಘುಮೂರ್ತಿ ಅವರು ಮತ್ತು   ಪರಶುರಾಂಪುರ  ಠಾಣಾಧಿಕಾರಿ  ಸ್ವಾತಿ ಸ್ಥಳಕ್ಕೆ ಆಗಮಿಸಿ ಮೃತ ಶರೀರವನ್ನು ಶೋಧ ನಡೆಸಿ ಮೃತ ದೇಹವನ್ನು  ಮರಣೋತ್ತರ ಪರೀಕ್ಷೆಗೆ ಮೃತ ದೇಹ ಕಳುಹಿಸಿದ್ದಾರೆ.

ಜನರನ್ನು  ಉದ್ದೇಶಿಸಿ ಮಾತನಾಡಿದ ತಹಶೀಲ್ದಾರ್ ಎನ್. ರಘುಮೂರ್ತಿ ಅವರು  ವೇದಾವತಿ ನದಿ ತುಂಬಿ ಹರಿಯುತ್ತಿರುವುದರಿಂದ ಯಾವುದೇ ಸಾರ್ವಜನಿಕರು ನದಿ ಪಾತ್ರದಲ್ಲಿ ಎಚ್ಚರಿಕೆಯಿಂದ ಜೀವನ ಸಾಗಿಸಬೇಕು. ಎಲ್ಲಾ ಮಕ್ಕಳನ್ನು  ಮತ್ತು ಹಿರಿಯ ನಾಗರಿಕರು ನದಿ ದಂಡೆಯಲ್ಲಿ  ಹೋಗಬಾರದು ಎಂದು ಮನವಿ ಮಾಡಿದರು.

[t4b-ticker]

You May Also Like

More From Author

+ There are no comments

Add yours