ಮೊಳಕಾಲ್ಮುರು ಪ್ರವೇಶಿಸಿದ ರಾಹುಲ್ ಗೆ ಪವರ್ ಕಟ್ ಬಿಸಿ

 

ಚಿತ್ರದುರ್ಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕೈಗೊಂಡಿರುವ ಭಾರತ್ ಜೋಡೋ ಪಾದಯಾತ್ರೆ ಚಿತ್ರದುರ್ಗ ಜಿಲ್ಲೆಯ  ಮೊಳಕಾಲ್ಮೂರು ಪ್ರವೇಶಿಸಿದೆ.

ಸಚಿವ ಬಿ. ಶ್ರೀರಾಮುಲು ಅವರ ಸ್ವ  ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಭರ್ಜರಿ  ಶಕ್ತಿ ಪ್ರದರ್ಶನ ನಡೆಸಲಾಗಿದೆ.

ದಿನದ ಪಾದಯಾತ್ರೆ ಅಂತ್ಯಗೊಂಡ ನಂತರ ರಾಹುಲ್ ಗಾಂಧಿ ಬಹಿರಂಗ ಸಮಾವೇಶ ನಡೆಸಿದ್ದಾರೆ. ಮೊಳಕಾಲ್ಮೂರು ಸರ್ಕಲ್ ನಲ್ಲಿ ರಾಹುಲ್ ಗಾಂಧಿ ಕಾರ್ನರ್ ಮೀಟಿಂಗ್ ನಡೆಸಿದ್ದಾರೆ.

ಪಾದಯಾತ್ರೆ ಮೊಳಕಾಲ್ಮೂರು ಪ್ರವೇಶಿಸುತ್ತಿದ್ದಂತೆ ಪವರ್ ಕಟ್ ಆಗಿದೆ. ರಾಹುಲ್ ಗಾಂಧಿ ಸ್ವಾಗತಕ್ಕಾಗಿ ಮೊಳಕಾಲ್ಮುರಿನಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿತ್ತು. ಆದರೆ, ವಿದ್ಯುತ್ ಕಡಿತವಾಗಿದ್ದರಿಂದ ಕಲರ್ ಕಲರ್ ಲೈಟ್ ಗಳು ಬೆಳಗದೆ ವಿಶೇಷ ದೀಪಲಂಕಾರ ವ್ಯರ್ಥವಾಗಿದೆ. ಕತ್ತಲಿನಲ್ಲಿಯೇ ನಡೆದುಕೊಂಡು ರಾಹುಲ್ ಗಾಂಧಿ ವೇದಿಕೆಗೆ ಆಗಮಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours