ಚಳ್ಳಕೆರೆಯಲ್ಲಿ ಮೊಳಗುತ್ತಿದೆ ಪ್ರಭು ಶ್ರೀರಾಮಚಂದ್ರನ ನಾಮಸ್ಮರಣೆ

 

ಅಯೋಧ್ಯೆಯ ಬಾಲರಾಮನ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ವಿವಿಧ ದೇವಸ್ಥಾನಗಳಲ್ಲಿ ಪೂಜಾ ಕಾರ್ಯಕ್ರಮ : ಡಾ.ಡಿ.ಎನ್.ಮಂಜುನಾಥ.

ಚಳ್ಳಕೆರೆ: ಮರ್ಯಾದ ಪುರುಷೋತ್ತಮ ಪ್ರಭುಶ್ರೀರಾಮಚಂದ್ರ ಜನಿಸಿದ ಅಯೋಧ್ಯೆಯಲ್ಲಿ ಜ.೨೨ರ ಸೋಮವಾರ ಶ್ರೀಬಾಲರಾಮನ ಪ್ರತಿಷ್ಠಾಪನಾ ಕಾರ್ಯಕ್ರಮ ವಿಶ್ವಮಟ್ಟದಲ್ಲಿ ಗಮನಸೆಳೆದಿದೆ. ಶ್ರೀರಾಮಜನ್ಮಭೂಮಿಟ್ರಸ್ಟ್, ವಿಶ್ವಹಿಂದೂಪರಿಷತ್ ಹಾಗೂ ಹಿಂದೂಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಭವ್ಯವಾದ ರಾಮಮಂದಿರದ ನಿರ್ಮಾಣವಾಗಿದ್ದು, ಇದರ ಉದ್ಘಾಟನೆಗೆ ವಿಶ್ವದಾದ್ಯಂತ ಕೋಟ್ಯಾಂತರ ರಾಮಭಕ್ತರು ಪುಣ್ಯದ ಕ್ಷಣಗಳಿಗಾಗಿ ಕಾಯುತ್ತಿದ್ದು, ಚಳ್ಳಕೆರೆ ನಗರದ ವಿವಿಧೆಡೆಗಳಲ್ಲೂ ಸಹ ಶ್ರೀಬಾಲರಾಮನ ಪ್ರತಿಷ್ಠಾಪನಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ಹಲವಾರು ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ವಿಶ್ವಹಿಂದೂಪರಿಷತ್ ತಾಲ್ಲೂಕು ಅಧ್ಯಕ್ಷ ಡಾ.ಡಿ.ಎನ್.ಮಂಜುನಾಥ ತಿಳಿಸಿದ್ಧಾರೆ.

ಅವರು, ಈ ಬಗ್ಗೆ ಮಾಹಿತಿ ನೀಡಿ, ಚಳ್ಳಕೆರೆ ತಾಲ್ಲೂಕಿನಾದ್ಯಂತ ಶ್ರೀರಾಮಚಂದ್ರನ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಅಯೋಧ್ಯೆಯಿಂದ ಆಗಮಿಸಿದ ಮಂತ್ರಾಕ್ಷತೆ, ಕರಪತ್ರ ಹಾಗೂ ಶ್ರೀರಾಮನ ಭಾವಚಿತ್ರವನ್ನು ಭಕ್ತಿಶ್ರದ್ದೆಯಿಂದ ನೂರಾರು ಹಿಂದೂಬಂಧುಗಳು ಮನೆ, ಮನೆಗೆ ತೆರಳಿ ವಿತರಣೆ ಮಾಡಿದ್ಧಾರೆ. ಮಂತ್ರಾಕ್ಷತೆ ಪಡೆದವರು ಜ.೨೨ರ ಪ್ರತಿಷ್ಠಾಪನಾ ಕಾರ್ಯಕ್ರಮದ ನಂತರ ಸದರಿ ಮಂತ್ರಾಕ್ಷತೆಯನ್ನು ಪಾಯಸ, ಇತರೆ ಸಿಹಿಪದಾರ್ಥಗಳಿಗೆ ಬೆರೆಸಿ ಸೇವಿಸಬಹುದಾಗಿದೆ.

 

ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಬ್ರಾಹ್ಮಣ ಸಂಘ, ವಿಶ್ವಹಿಂದೂಪರಿಷತ್, ಬ್ರಹ್ಮಚೈತನ್ಯಮಂಡಳಿ, ಶ್ರೀಮಲ್ಲಿಕಾರ್ಜುನ ದೇವಸ್ಥಾನ ಟ್ರಸ್ಟ್ ಇವುಗಳ ಸಂಯುಕ್ತಾಶ್ರಯದಲ್ಲಿ ೨೨ರ ಬೆಳಗ್ಗೆ ೯ಕ್ಕೆ ಶ್ರೀರಾಮತಾರಕ ಹೋಮ, ವೇದಬ್ರಹ್ಮ ಪ್ರದೀಪ್‌ಶರ್ಮ ಮತ್ತು ತಂಡದಿAದ ಪ್ರಾರಂಭವಾಗಲಿದ್ದು, ಪ್ರತಿಷ್ಠಾಪನೆಯ ನಂತರ ನರಹರಿಸದ್ಗುರು ಆಶ್ರಮದ ವೈ.ರಾಜರಾಮ್‌ರವರು ಅಯೋಧ್ಯೆಯ ಶ್ರೀರಾಮಮಂದಿರ ವೈಶಿಷ್ಟಗಳ ಬಗ್ಗೆ ಉಪನ್ಯಾಸ ನೀಡುವರು. ಹಳೇಟೌನ್‌ನ ಶ್ರೀರಾಮಮಂದಿರದಲ್ಲೂ ಸಹ ಪೂಜಾ ಕಾರ್ಯಕ್ರಮಗಳನ್ನು ಆರ್ಚಕ ಎ.ಶಿವಕುಮಾರಶರ್ಮ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ನಾಯಕನಹಟ್ಟಿ ರಸ್ತೆಯ ಶ್ರೀಕರೇಕಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲೂ ಶ್ರೀರಾಮತಾರಕಹೋಮ ಹಾಗೂ ಇನ್ನಿತರಪೂಜಾ ಕಾರ್ಯಕ್ರಮಗಳನ್ನು ವೇದಬ್ರಹ್ಮ ನಾಗಶಯನಗೌತಮ್ ಮತ್ತು ತಂಡದೊಂದಿಗೆ ಹಮ್ಮಿಕೊಳ್ಳಲಾಗಿದೆ.

ಗಾಂಧಿನಗರದ ಸಾಯಿಬಾಬಾ ಮಂದಿರ, ವಿಠಲನಗರದ ಪಾಂಡುರAಗದೇವಸ್ಥಾನ, ಬೆಂಗಳೂರು ರಸ್ತೆಯ ಶ್ರೀವಾಸವಿ ಮಹಲ್‌ನ ವಾಸವಾಂಭೆ ದೇವಸ್ಥಾನದಲ್ಲಿ ರಾಮತಾರಕಹೋಮ ಕಾರ್ಯಕ್ರಮಗಳು ನಡೆಯಲಿವೆ.

ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಶ್ರೀಬಾಲರಾಮನ ಪ್ರತಿಷ್ಠಾಪನಾ ಕಾರ್ಯಕ್ರಮ ಕುರಿತು ನಗರದ ನೆಹರೂ ವೃತ್ತ, ವಾಲ್ಮೀಕಿ ವೃತ್ತ, ಅಂಬೇಡ್ಕರ್ ವೃತ್ತ ಮುಂತಾದ ಕಡೆಗಳಲ್ಲಿ ಕಾರ್ಯಕ್ರಮ ಯಶಸ್ವಿಗೆ ಶುಭಹಾರೈಸಿ ಶ್ರೀರಾಮಭಕ್ತರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಪ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಅಳವಡಿಸಿ ಶುಭಕೋರಿದ್ದಾರೆ.

ಇದನ್ನೂ ಓದಿ: ಜನವರಿ 23ರಂದು ವಿದ್ಯುತ್ ವ್ಯತ್ಯಯ

ಚಳ್ಳಕೆರೆ ನಗರದವೂ ಸೇರಿದಂತೆ ತಾಲ್ಲೂಕಿನಾದ್ಯಂತ ಈಗ ಎಲ್ಲೆಡೆ ಶ್ರೀರಾಮನ ನಾಮಸ್ಮರಣೆ ಹೆಚ್ಚಾಗಿದೆ. ಅಯೋಧ್ಯೆಯ ರಾಮಮಂದಿರದಲ್ಲಿ ನಿರ್ಮಾಣವಾಗಲಿರುವ ಶ್ರೀಬಾಲರಾಮನ ಪ್ರತಿಷ್ಠಾಪನಾ ಕಾರ್ಯಕ್ರಮ ವಿಶ್ವದ ಗಮನ ಸೆಳೆದಿದೆ.

[t4b-ticker]

You May Also Like

More From Author

+ There are no comments

Add yours