ಚಿತ್ರದುರ್ಗ (ಕರ್ನಾಟಕ ವಾರ್ತೆ) ಆಗಸ್ಟ್ 19:
ರಸ್ತೆ ಅಗಲೀಕರಣ ಕಾಮಗಾರಿಗೆ ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿರುವ 66/11 ಕೆ.ವಿ. ಚಿತ್ರದುರ್ಗ ವಿದ್ಯುತ್ ವಿತರಣಾ ಕೇಂದ್ರದಲ್ಲಿ 03, 11 ಕವಿ ಮಾರ್ಗಗಳ ಮಾರ್ಗ ಮುಕ್ತತೆಯನ್ನು ನೀಡಬೇಕಾಗಿರುವುದರಿಂದ ಆಗಸ್ಟ್ 21ರಂದು ಚಿತ್ರದುರ್ಗದ ಚಿಕ್ಕಪೇಟೆ, ದೊಡ್ಡಪೇಟೆ ಗಾಂಧಿ ವೃತ್ತ, ಲಕ್ಷ್ಮೀ ಬಜಾರ್, ಆನೇಬಾಗಿಲು, ಡಿ.ಸಿ.ಕಚೇರಿ, ಧರ್ಮ ಶಾಲಾ ರಸ್ತೆ, ಕೆಳಕೊಟೆ, ಸಿ.ಕೆ.ಪುರ, ಚರ್ಚ್ ರಸ್ತೆ, ತುರುವನೂರು ರಸ್ತೆ ಎಮ್.ಸಿ ಕಾಲೋನಿ, ಹೌಸಿಂಗ್ ಬೋರ್ಟ್, ಜೆ.ಸಿ.ಆರ್ ಬಡಾವಣೆ 5,6,8 ಮತ್ತು 1 ನೇ ಕ್ರಾಸ್ ಮಾರುತಿ ನಗರ ಗೋಪಾಲಪುರ ರಸ್ತೆ, ಇಮ್ಮತ್ ನಗರ, ಜಯಪದ್ಮ ಕಟ್ಟಡ, ಹನುಮಾನ್ ವೃತ್ತ, ಜಿ-7 ಸೂಪರ್ ಮಾರ್ಕೆಟ್, ಉದಯ ನರ್ಸಿಗ್ ಹೋಮ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು : 66/11 ಕೆವಿ ಚಿತ್ರದುರ್ಗ ವಿವಿ ಕೇಂದ್ರದಿಂದ ಸರಬರಾಜಾಗುವ 03, 11 ಕೆವಿ ಮಾರ್ಗಗಳಲ್ಲಿ ವಿದ್ಯುತ್ ಅಡಚಣೆಯಾಗುತ್ತದೆ.
ಚಿತ್ರದುರ್ಗ : ಎಫ್-1 ನಗರ, ಎಫ್-2 ಕೆಳಕೊಟೆ, ಎಫ್-12 ಜೆ.ಸಿ.ಆರ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಚಿತ್ರದುರ್ಗ ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
[t4b-ticker]
+ There are no comments
Add yours