ಚಳ್ಳಕೆರೆ: ಪ್ರಸ್ತುತ ಜಾರಿಯಲ್ಲಿರುವ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಅಪಾರ ಪ್ರಮಾಣದ ಹಣವನ್ನು ಬುಲರೋ ವಾಹನದಲ್ಲಿ ಕೊಂಡ್ಯೊಯುವಾಗ ತಪಾಸಣೆ ನಡೆಸಿದ ಎಫ್ಎಸ್ಟಿ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ವಾಹನ ಮತ್ತು ಹಣವನ್ನು ವಶಪಡಿಸಿಕೊಂಡಿದ್ದಾರೆ.
ತಾಲ್ಲೂಕಿನ ಹಿರೇಹಳ್ಳಿ ಚೆಕ್ ಪೋಸ್ಟ್ ಬಳಿ ಎಫ್ಎಸ್ಟಿ ತಂಡದ ಮುಖ್ಯಸ್ಥ ಡಾ.ಎಚ್.ರಂಗಪ್ಪ, ಸಿಪಿಐ ಕೆ.ಸಮೀವುಲ್ಲಾ, ಪಿಎಸ್ಐ ಎಚ್.ಗಾದಿಲಿಂಗ, ಎಫ್ಎಸ್ಟಿ ತಂಡದ ಅಜ್ಜಯ್ಯ ಮತ್ತು ಇತರರು ಬಳ್ಳಾರಿಯಿಂದ ಚಳ್ಳಕೆರೆ ಕಡೆಗೆ ಬುಲರೋ ಪಿಕಪ್ ವಾಹನದಲ್ಲಿ ಯಾವುದೇ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ ಸುಮಾರು 4.72.620ರೂ ಹಣವನ್ನು ವಶಪಡಿಸಿಕೊಂಡಿದ್ದು, ಸೇಲ್ಸ್ ಮ್ಯಾನೇಜರ್ ನಗರಂಗೆರೆ ಎಚ್.ಸತೀಶ್, ಕಾಟಪ್ಪನಹಟ್ಟಿಯ ಪಿ.ಮುರುಳಿಕೃಷ್ಣ ಇವರ ಮೇಲೆ ಪ್ರಕರಣ ದಾಖಲಾಗಿರುತ್ತದೆ.
ಮತ್ತೊಂದು ಪ್ರಕರಣದಲ್ಲಿ ಬಳ್ಳಾರಿಯಿಂದ ಚಳ್ಳಕೆರೆ ಕಡೆಗೆ ಬುಲೆರೋ ಪಿಕಪ್ ವಾಹನದಲ್ಲಿ ಸುಮಾರು 1.48.600 ನಗದು ಹಣ ಪತ್ತೆಯಾಗಿದ್ದು ಈ ಬಗ್ಗೆ ಸೂಕ್ತ ದಾಖಲಾತಿಗಳು ನೀಡದ ಕಾರಣ ಹಣವನ್ನು ಜಪ್ತಿ ಮಾಡಲಾಗಿದೆ. ವಾಹನದಲ್ಲಿ ಪ್ರಯಾಣಿಸುತ್ತಿದ್ದ ಗೊಡಬನಾಳ್ ಬಸಯ್ಯ ಹಿರೇಮಠ್, ಜಗಳೂರಿನ ಎಚ್.ಟಿ.ಮುರುಳಿಇವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಲಾಗಿದೆ.
[t4b-ticker]
+ There are no comments
Add yours