ನ.19 ರಂದು ಮೊಳಕಾಲ್ಮೂರು ತಾಲ್ಲೂಕು ಕೆರೆಕೊಂಡಾಪುರದಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

 

ಚಿತ್ರದುರ್ಗ(ಕರ್ನಾಟಕ ವಾರ್ತೆ).ನ14:
ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಅವರು ಇದೇ ನವೆಂಬರ್ 19 ರಂದು ಮೊಳಕಾಲ್ಮೂರು ತಾಲ್ಲೂಕು ಕೆರೆಕೊಂಡಾಪುರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ. ಉಳಿದಂತೆ ಚಿತ್ರದುರ್ಗದ ಜೋಡಿಚಿಕ್ಕೇನಹಳ್ಳಿ, ಹಿರಿಯೂರಿನ ಮದ್ದನಕುಂಟೆ, ಚಳ್ಳಕೆರೆಯ ದೊಡ್ಡಚೆಲ್ಲೂರು, ಹೊಸದುರ್ಗದ ನಗರಗೆರೆ, ಹೊಳಲ್ಕೆರೆಯ ಬೂದಿಪುರ ಗ್ರಾಮಗಳಲ್ಲಿ ಆಯಾ ತಾಲ್ಲೂಕು ತಹಶೀಲ್ದಾರರು ಗ್ರಾಮವಾಸ್ತವ್ಯ ಹೂಡಲಿದ್ದಾರೆ.
ಕಂದಾಯ ಅಧಿಕಾರಿಗಳು ಗ್ರಾಮವಾಸ್ತವ್ಯ ಜರುಗುವ ಗ್ರಾಮಗಳಿಗೆ ಭೇಟಿ ನೀಡಿ ಫಲಾನುಭವಿಗಳ ಅರ್ಜಿಗಳನ್ನು ಸಂಗ್ರಹಿಸಲಿದ್ದಾರೆ. ಸಾರ್ವಜನಿಕರು ಅಹವಾಲುಗಳನ್ನು ಸಂಬಂಧಪಟ್ಟ ಕಂದಾಯ ಅಧಿಕಾರಿಗಳಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.

[t4b-ticker]

You May Also Like

More From Author

+ There are no comments

Add yours