ಎನ್.ಮಹದೇವಪುರ ಸಮಸ್ಯೆ ಮುಕ್ತ ಗ್ರಾಮಕ್ಕೆ ಎಲ್ಲಾ ಸಿದ್ದತೆ:ಎನ್‌.ರಘುಮೂರ್ತಿ

 

ಚಳ್ಳಕೆರೆ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ  ಕಾರ್ಯಕ್ರಮಕ್ಕೆ   ಮಹಾದೇವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎನ್ ಮಹದೇವಪುರ ಸೇರಿ ಎಲ್ಲಾ ಗ್ರಾಮಗಳು ಸಮಸ್ಯೆ ಮುಕ್ತವಾಗಲಿವೆ  ಎಂದು ತಹಸಿಲ್ದಾರ್ ಎನ್ ರಘುಮೂರ್ತಿ ತಿಳಿಸಿದರು.

ಕಾರ್ಯಕ್ರಮದ ಸಿದ್ದತೆ ಸಭೆಯಲ್ಲಿ ಮಾತನಾಡಿ ಜಿಲ್ಲಾಧಿಕಾರಿಗಳು ದಿನಾಂಕ 17 12 2022 ರಂದು ಎನ್ ಮಹದೇವಪುರ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆಯ ಕಡೆ ಎಂಬ ವಿನೂತನ ಕಾರ್ಯಕ್ರಮವನ್ನು ಉದ್ಘಾಟಿಸಿ ವಾಸ್ತವ್ಯ ಮಾಡಲಿದ್ದಾರೆ. ಪೂರ್ವಭಾವಿಯಾಗಿ ಇಂದು ಚಳ್ಳಕೆರೆ ತಾಲ್ಲೂಕು ಮಟ್ದದ  ಎಲ್ಲಾ ಅಧಿಕಾರಿಗಳ ತಂಡ  ಮಹದೇವಪುರ  ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯ ಗ್ರಾಮ ಪಂಚಾಯತಿ  ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಗ್ರಾಮ ಪಂಚಾಯಿತಿಯ ಸದಸ್ಯರುಗಳು ಮತ್ತು ಗ್ರಾಮದ ಸಾರ್ವಜನಿಕರೊಂದಿಗೆ ಎಲ್ಲ ಸಮಸ್ಯೆಗಳನ್ನು ಆಲಿಸಿದ್ದು  ಪ್ರತಿಯೊಂದು ಇಲಾಖೆ ಅಧಿಕಾರಿಗಳು ಇಂದಿನಿಂದ ಒಂದು ವಾರ ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸಂಚರಿಸಿ ಸಮಸ್ಯೆಗೆ ಪರಿಹಾರ ಒದಗಿಸಲಿದ್ದಾರೆ.  ಗ್ರಾಮದ ಪ್ರತಿಯೊಂದು ಮನೆಗೆ  ಭೇಟಿ ನೀಡಿ ಈ ಮನೆಯಲ್ಲಿರುವಂತ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳು ಸರಿಯಾಗಿ ವಿತರಣೆಯಾಗಿವೆ ಇಲ್ಲವೇ ಎಂಬುದರ ಬಗ್ಗೆ ಖಚಿತಪಡಿಸಲಿದ್ದಾರೆ.

ಕಂದಾಯ ಇಲಾಖೆಗೆ ಸಂಬಂಧಿಸಿದಂತೆ  ಪೌತಿ ಖಾತೆ, ಪೋಡಿ, ರೈತರ ಪರಿಹಾರ, ದಾರಿ ವಿವಾದಗಳು, ಸ್ಮಶಾನದ ಸಮಸ್ಯೆಗಳು ಸೇರಿ  ಅಗತ್ಯವಾಗಿ ಗ್ರಾಮಕ್ಕೆ ಬೇಕಾಗಿರುವ  ಸರ್ಕಾರಿ ಜಮೀನು ಅಗತ್ಯತೆಗಳು ಸೇರಿದಂತೆ ಎಲ್ಲಾ  ಬಗೆಯ ಸಮಸ್ಯೆಗಳನ್ನು ಮುಂಬರುವ ಶನಿವಾರದೊಳಗೆ ಬಗೆಹರಿಸಲಿದ್ದಾರೆ.

ಸಾರ್ವಜನಿಕರು ಸಮಸ್ಯೆಗಳನ್ನು  ಅಧಿಕಾರಿಗಳ  ಗಮನಕ್ಕೆ ತರಲಬೇಕು ಎಂದರು. ಈ ಕಾರ್ಯಕ್ರಮದಲ್ಲಿ  ಜಿಲ್ಲಾಧಿಕಾರಿಗಳು,  ಸಚಿವರು  ಈ ಸಮಾರಂಭಕ್ಕೆ ಆಹ್ವಾನಿಸಲಾಗಿದೆ.. ತಾಲೂಕ್ ಮಟ್ಟದ ಎಲ್ಲಾ ಅಧಿಕಾರಿಗಳು ಕೂಡ ತಮ್ಮ ಇಲಾಖೆಯ ಕೆಲಸ ಕಾರ್ಯಗಳು ಬಗ್ಗೆ ಮತ್ತು  ಸಮಸ್ಯೆಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಒದಗಿಸಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಯಂತಿ ಪಂಚಾಯತಿಯ ಎಲ್ಲ ಸದಸ್ಯರುಗಳು, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ತಿಪ್ಪೇಸ್ವಾಮಿ, ಪಿಡಿಒ ರಾಜಸ್ವಾ ನಿರೀಕ್ಷಕರದ ಚೇತನ್ ಕುಮಾರ್ ಗ್ರಾಮ ಲೆಕ್ಕಾಧಿಕಾರಿ ಉಮಾ ಮುಂತಾದವರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours