ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡಲು ಶಿಕ್ಷಣದ ಜೊತೆಗೆ ಸಂಗೀತ ಅಗತ್ಯ: ಶಾಸಕ ಟಿ.ರಘುಮೂರ್ತಿ

 

ಚಳ್ಳಕೆರೆ-24: ( challakere)34 ವರ್ಷಗಳ ಕಾಲ ರಾಜ್ಯ, ಅಂತರಾಜ್ಯ, ರಾಷ್ಟ್ರ ಮಟ್ಟದಲ್ಲಿ ನೃತ್ಯ ಪ್ರದರ್ಶನ ನೀಡಿ ನೃತ್ಯಕ್ಕೆ ಚಳ್ಳಕೆರೆ ಕೊಡುಗೆ ವಿಶೇಷ ಗೌರವ ತಂದು ಕೊಟ್ಟವರು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಅವರು ನಗರದ ವಾಸವಿ ಮಹಲ್ ನಲ್ಲಿ ಚಳ್ಳಕೆರೆ ಹಬ್ಬ-2022 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು‌. ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡಲು ಶಿಕ್ಷಣದ ಜೊತೆಗೆ ಸಂಗೀತ ಅಗತ್ಯವಾಗಿದೆ. ಶಿಕ್ಷಣದ ಜೊತೆಯಲ್ಲಿ ಪ್ರತಿಭೆಗಳನ್ನು ಗುರುತಿಸಿ ನಮ್ಮ‌ ಸಂಸ್ಕ್ರತಿಯನ್ನು ಹೆಚ್ಚಿಸುವ ಕೆಲಸವಾಗಿದೆ. ಶಾಸ್ತ್ರೀಯ ಸಂಗೀತಕ್ಕೆ ಒಂದು‌ ಗೌರವ ನೀಡಿದ ಪ್ರಾಚಾರ್ಯೆ ಸುಧಾಮೂರ್ತಿ, ಯು.ಎಸ್.ವಿಷ್ಣುಮೂರ್ತಿರಾವ್ ರವರ ಸಾಧನೆ ಅನನ್ಯ. ಎಲ್ಲಾ ಸಂದರ್ಭದಲ್ಲಿ ನೃತ್ಯನಿಕೇತನದ ಸಾಮಾಜಿಕ ಸೇವೆ ಅಗತ್ಯವಾಗಿದೆ. ವಿದ್ಯಾಭ್ಯಾಸದ ಜತೆಗೆ ವಿಶೇಷ ಮಕ್ಕಳು ರೂಢಿಸಿಕೊಳ್ಳಬೇಕು ಎಂದರು.
ಸಾಹಿತಿ ತಿಪ್ಪಣ್ಣಮರಿಕುಂಟೆ, ಸಿ.ವೈ.ಶಿವರುದ್ರಪ್ಪ, ಪುಪ್ಪಲತ ಮಾತನಾಡಿದರು.

[t4b-ticker]

You May Also Like

More From Author

+ There are no comments

Add yours