ಶಾಸಕ ತಿಪ್ಪಾರೆಡ್ಡಿ ಅವರಿಂದ ಭರ್ಜರಿ ಮತಬೇಟೆ

 

ಚಿತ್ರದುರ್ಗ: ಸಾವಿರಾರು ಕೋಟಿ ಅನುದಾನ ತರುವ ಮೂಲಕ ಚಿತ್ರದುರ್ಗ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದು ಜನರು ಅಭಿವೃದ್ಧಿಗೆ ಮತ ನೀಡುವ ಭರವಸೆ ನನಗಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ತಾಲೂಕಿನ ಪಿಳ್ಳೇಕರನಹಳ್ಳಿ, ಮಲ್ಲಪುರ, ಮಲ್ಲಪುರ ಗೊಲ್ಲರಹಟ್ಟಿ, ಗೊನೂರು, ಬಚ್ಚಪ್ಪರನಹಟ್ಟಿ, ಮತ್ತಯ್ಯನಹಟ್ಟಿ ಗ್ರಾಮಗಳಲ್ಲಿ ಭರ್ಜರಿ  ಚುನಾವಣಾ ಪಚಾರ ನಡೆಸಿ ಮತಯಾಚನೆ ಮಾಡಿ ಮಾತನಾಡಿದರು.
ಬಿಜೆಪಿ ಸರ್ಕಾರ ಬಡವರ ಪರವಾದ ಕೆಲಸ ಮಾಡಿತ್ತಿದೆ. ಚಿತ್ರದುರ್ಗ ಕ್ಷೇತ್ರದಲ್ಲಿ ರಸ್ತೆ,ಕುಡಿಯುವ ನೀರು, ಚಕ್ ಡ್ಯಾಂ ಗಳು,ವಾಣಿವಿಲಾಸ ಸಾಗರದಿಂದ ಕುಡಿಯುವ ನೀರು ತರುವ ಕೆಲಸ ಮಾಡಿದ್ದೇನೆ. ಪ್ರತಿ ಹಳ್ಳಿಯಲ್ಲಿ ಸಿ.ಸಿ.ರಸ್ತೆಗಳು ಮಾಡಿದ್ದೇನೆ. ಕೋವಿಡ್ ಸಂದರ್ಭದಲ್ಲಿ ಜನರ ಜೊತೆಗಿದ್ದು  ಆಹಾರದ ಕಿಟ್ ನೀಡಿ ಜನರ ಕಷ್ಟಕ್ಕೆ ಸ್ಪಂದಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಗಳ ಮುಖಂಡರು ಮತ್ತು ಯುವಕರು ಭಾಗವಹಿಸಿದ್ದರು..
[t4b-ticker]

You May Also Like

More From Author

+ There are no comments

Add yours