ಸಾಧಿಕ್ ನಗರದಲ್ಲಿ ವಿದ್ಯುತ್ ತಂತಿ ತಗುಲಿ ಬಾಲಕ ಬಲಿ, ಕುಟುಂಬಕ್ಕೆ ಸಾಂತ್ವನ ಹೇಳಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ:ಚಿತ್ರದುರ್ಗ ನಗರದ ಸಾಧಿಕ್ ನಗರ ಬಡಾವಣೆಯಲ್ಲಿ  ವಿದ್ಯುತ್ ತಂತಿ ತಗುಲಿ  ಮಣಿಕಂಠ 10  ವರ್ಷದ ಮಗು  ಮೃತಪಟ್ಟಿದ್ದು  ಸ್ಥಳಕ್ಕೆ ಬೇಟಿ ನೀಡಿ  ನಂತರ ಜಿಲ್ಲಾ ಆಸ್ಪತ್ರೆಗೆ ಆಗಮಿಸಿ ಮೃತ ದೇಹ ವೀಕ್ಷಿಸಿದ ನಂತರ   ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಭೇಟಿ  ಕುಟುಂಬಕ್ಕೆ  ಸಾಂತ್ವನ  ಹೇಳಿ ವೈಯಕ್ತಿಕವಾಗಿ 50 ಸಾವಿರ ಪರಿಹಾರ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿ ನಗರಸಭೆ 35 ವಾರ್ಡ್ ವ್ಯಾಪ್ತಿಯಲ್ಲಿ ಬರುವ ಸಾಧಿಕ್ ನಗರದಲ್ಲಿ ಚಿಕ್ಕ ಮಗು ಆಟವಾಡುವ ವೇಳೆ ವಿದ್ಯುತ್ ತಂತಿ ತಗುಲಿ ಅಸುನೀಗಿರುವುದು ತುಂಬಾ ನೋವಿನ ಸಂಗತಿಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ, ನಗರಸಭೆ, ಕೆಇಬಿ ಇಲಾಖೆಯ ಮಾಹಿತಿ ಪಡೆದು ಕುಟುಂಬಕ್ಕೆ ಸರ್ಕಾರದಿಂದ  ಪರಿಹಾರ ಒದಗಿಸಲಾಗುವುದು. ತಂದೆ ಉದ್ಯೋಗಕ್ಕಾಗಿ  ಬೆಂಗಳೂರಲ್ಲಿ ಇದ್ದಾರೆ ಎಂಬುದು ತಿಳಿದಿದ್ದು ತಂದೆ ಬಂದ ನಂತರ ಆಸ್ಪತ್ರೆಯಿಂದ ಮೃತ ದೇಹ ಕೊಂಡೊಯ್ಯುಲಿ   ಅಧಿಕಾರಿಗಳಿಗೆ  ಮತ್ತು ಆಸ್ಪತ್ರೆ ಅಧಿಕಾರಿಗಳಿಗೆ ತಿಳಿಸಿದ್ದು ಅದಷ್ಟು ಬೇಗ ಎಲ್ಲಾ ಪ್ರಕ್ರಿಯೆ ಮುಗಿಸುತ್ತಾರೆ. ಮುಂದಿನ ದಿನದಲ್ಲಿ ಕುಟುಂಬಕ್ಕೆ  ಸರ್ಕಾರದ ಸೌಲಭ್ಯ ಮುಖಾಂತರ  ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.
[t4b-ticker]

You May Also Like

More From Author

+ There are no comments

Add yours