ಶಾಸಕ ಟಿ.ರಘುಮೂರ್ತಿ ನಾಮಪತ್ರ ಸಲ್ಲಿಕೆಗೆ ಹರಿದು ಬಂದ ಜನ ಸಾಗರ

 

ಚಳ್ಳಕೆರೆ: ಎಣ್ಣೆ ನಗರಿ   ಮತ್ತು ವಿದ್ಯಾ ನಗರಿ  ಚಳ್ಳಕೆರೆ  ಕ್ಷೇತ್ರದಿಂದ ಕಾಂಗ್ರೆಸ್  ಅಭ್ಯರ್ಥಿಯಾಗಿ ಹಾಲಿ ಶಾಸಕ ಟಿ.ರಘುಮೂರ್ತಿ  ಅವರು  ನಾಮಪತ್ರ ಸಲ್ಲಿಸುವ ಸಂಬಂಧ ಏರ್ಪಡಿಸಿರುವ “ರೋಡ್ ಶೋ”ಗೆ ಜನಸಾಗರವೇ ಹರಿದು ಬಂದಿತ್ತು.

ಕೆಪಿಸಿಸಿ ಕಾರ್ಯಧ್ಯಕ್ಷ ಚಂದ್ರಪ್ಪ, ರಾಜ್ಯ ಸಂಘಟಿನ ಕಾರ್ಮಿಕ ವರ್ಗದ ರಾಜ್ಯಧ್ಯಕ್ಷ  ಜಿ.ಎಸ್.ಮಂಜುನಾಥ,ಬ್ಲಾಕ್  ಕಾಂಗ್ರೆಸ್ ಅಧ್ಯಕ್ಷರು ಮತ್ತು ಶಾಸಕರ  ಪತ್ನಿ ಗಾಯತ್ರಮ್ಮ  ಪುತ್ರಿ ಸಹ ಸಾಥ್ ನೀಡಿದರು.
ಚಳ್ಳಕೆರೆ ನಗರದ ಎಲ್ಲಾ ರಸ್ತೆಗಳು ಕಾಂಗ್ರೆಸಮಯವಾಗಿತ್ತು. ಎಲ್ಲಿ ನೋಡಿದರು ಕಾಂಗ್ರೆಸ್ ಭಾವುಟಗಳು, ಕಲಾ ತಂಡಗಳು, ಕಾಂಗ್ರೆಸ್ ಪರ ಜಯ ಘೋಷಗಳು ಕೇಳಿ ಬರುತ್ತಿದ್ದರು. ಬೆಂಗಳೂರು ರಸ್ತೆಯ ಉದ್ದಕ್ಕೂ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಜಮಾಸಿದ್ದು ಇಡೀ ರಸ್ತೆ ಬ್ಲಾಕ್ ಆಗಿತ್ತು.
  ರೋಡ್  ಶೋ”ಗೆ ಜನಸಾಗರ

ಚಳ್ಳಕೆರೆ ವೀರಭದ್ರಸ್ವಾಮಿ, ನಾಯಕನಹಟ್ಟಿ ತಿಪ್ಪೇಸ್ವಾಮಿ, ಚಳ್ಳಕೆರೆ ಶಕ್ತಿ ದೇವತೆ ಚಳ್ಳಕೆರಮ್ಮ , ಸಾಯಿಬಾಬಾ ಮಂದಿರ ಸೇರಿ ಎಲ್ಲಾ ದೇವಾನು ದೇವತೆಗಳ ಆಶೀರ್ವಾದ ಪಡೆಯುವ ಮೂಲಕ ನೇರವಾಗಿ  ನಾಮಪತ್ರ ಸಲ್ಲಿಸಿ  ನಂತರ ರೋಡ್ ಶೋ ಆರಂಭವಾಯಿತು. ಬೆಂಗಳೂರು ರಸ್ತೆ ಮುಖ್ಯ ಸರ್ಕಲ್ ಮೂಲಕ ತಾಲೂಕು ಕಚೇರಿ ತಲುಪಿದೆ.

 

ಚಳ್ಳಕೆರೆ ನೆಹರು ಸರ್ಕಲ್‌ ನಲ್ಲಿ ಪಟಾಕಿ ಸಿಡಿಸಿದರು. ಬೃಹತ್ ಹೂವಿನವನ್ನು ಕ್ರೈನ್ ಮೂಲಕ ಶಾಸಕರಿಗೆ ಹಾಕಿ ಶಾಸಕರ ಅಭಿಮಾನಿಗಳು  ಹ್ಯಾಟ್ರಿಕ್ ಗೆಲುವು ನಿಮ್ಮದೇ ಎಂಬ ಸಂದೇಶ ಕೂಗು ಎಲ್ಲಾರ ಬಾಯಲ್ಲಿ ಮೊಳಗಿತು. ..

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಟಿ‌.ರಘುಮೂರ್ತಿ ಚಳ್ಳಕೆರೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಶ್ರಮಿಸಿದ್ದೇನೆ. ಅಭಿವೃದ್ಧಿ ಎಂದರೆ ಏನು ಎಂಬುದು ಮಾಡಿ ತೋರಿಸಿದ್ದೇನೆ. ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದು  ಎಲ್ಲಾ ನನ್ನ ಮತದಾರರು ಕಾಂಗ್ರೆಸ್ ಕಾರ್ಯಕರ್ತರು ಎರಡು ಬಾರಿ ವಿಜಯಮಾಲೆ ನನ್ನ ಕೊರಳಿಗೆ ಹಾಕಿದ್ದಿರಿ. ತಾವುಗಳು ಮೂರನೇ ಬಾರಿ ಹಸ್ತದ ಗುರುತಿಗೆ ಕಾಂಗ್ರೆಸ್ ಗೆ ಮತ ಹಾಕುವ ಮತ್ತಷ್ಟು ಚಳ್ಳಕೆರೆ ಅಭಿವೃದ್ಧಿಗೆ ಕೈ ಜೋಡಿಸಬೇಕು. ಮೇ 10 ರಂದು ಕಾಂಗ್ರೆಸ್ ಗೆ ಬೆಂಬಲಿಸಿ ಎಂದು ಮನವಿ ಮಾಡಿದರು.

[t4b-ticker]

You May Also Like

More From Author

+ There are no comments

Add yours