ಚಿತ್ರದುರ್ಗ:ಮಳೆಯ ಸಂದರ್ಭದಲ್ಲಿ ಗುಡುಗು ಸಿಡಿಲು ಬಗ್ಗೆ ಎಚ್ಚರಿಕೆ ವಹಿಸಬೇಕು.ಪ್ರತಿಯೊಬ್ಬರ ಮೇಲೆ ಅವಲಂಬಿತ ಕುಟುಂಬವಿರುತ್ತದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ 21-05-2023 ರಂದು ಬಂದಂತಹ ಮಳೆಯ ಸಮಯದಲ್ಲಿ ಚಿಕ್ಕಗೊಂಡನಹಳ್ಳಿ ಗ್ರಾಮದಲ್ಲಿ ಭಾಗ್ಯಮ್ಮ ಕೋಂ ಯರಿಸ್ವಾಮಿ ಇವರು ಸಿಡಿಲು ಬಡಿದು ಮೃತ ಪಟ್ಟಿದ್ದು ಸದರಿ ಸಂತ್ರಸ್ಥರ ಕುಟುಂಬಕ್ಕೆ ಸರ್ಕಾರದಿಂದ ಬಂದಂತಹ ರೂ.5 ಲಕ್ಷಗಳ ಪರಿಹಾರ ಮೊತ್ತವನ್ನು ಮತ್ತು ದಿನಾಂಕ:29-04-2023 ರಂದು ಬಂದಂತಹ ಮಳೆಯಿಂದಾಗಿ ಪೇಲೂರಹಟ್ಟಿ ಮಜಿರೆ ಹೊಸಕಾಟಪ್ಪನಹಟ್ಟಿ ಗ್ರಾಮದಲ್ಲಿ ಚಂದ್ರಣ್ಣ ಬಿನ್ ಕರಡಿ ಬೋರಯ್ಯ ಇವರಿಗೆ ಸೇರಿದ 5 ಕುರಿ ಹಾಗೂ 1 ಮೇಕೆಯು ಸಿಡಿಲು ಬಡಿದು ಮೃತ ಪಟ್ಟಿದ್ದು ಸದರಿ ಕುರಿಗಳ ಮಾಲಿಕರಿಗೆ ಸರ್ಕಾರದಿದ ಬಂದಂತಹ ರೂ.24,000/- ಗಳ ಪರಿಹಾರ ಮೊತ್ತವನ್ನು ಫಲಾನುಭವಿಗಳಿಗೆ ಶಾಸಕರು ವಿತರಿಸಿದರು.
ಈ ಸಂದರ್ಭದಲ್ಲಿ ಚಿತ್ರದುರ್ಗ ತಾಲೂಕು ದಂಡಾಧಿಕಾರಿಗಳಾದ ನಾಗವೇಣಿ , ಕಂದಾಯ ನಿರೀಕ್ಷಕರಾದ ಎಂ.ಎನ್ .ಸ್ವಾಮಿ ಮತ್ತು ತಾಲೂಕು ಕಚೇರಿ ಅಧಿಕಾರಿಗಳು ಹಾಜರಿದ್ದರು.
[t4b-ticker]
+ There are no comments
Add yours