ಚಳ್ಳಕೆರೆ- ಕ್ಷೇತ್ರದಲ್ಲಿ ನಾನು ಮಾಡಿದ ಅಭಿವೃದ್ಧಿ ಕಾರ್ಯದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಲು ಸಾಧ್ಯವಾಯಿತು. ಈ ಚುನಾವಣೆಯಲ್ಲಿ ಅನೇಕ ಮುಖಂಡರು ತಂತ್ರ ,ಕುತಂತ್ರ, ಷಡ್ಯಂತ್ರ ಮಾಡಿ ನನ್ನ ಸೋಲಿಸಲು ಯತ್ನಿಸಿದರು ಸಹ ಜನರು ನನ್ನ ಪರವಾಗಿ ಮತ ಚಲಾಯಿಸುವ ಮೂಲಕ ಚಳ್ಳಕೆರೆ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದಿದ್ದಾರೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ಶಾಸಕ ಭವನದಲ್ಲಿ ಹ್ಯಾಟ್ರಿಕ್ ಗೆಲುವಿನ ನಂತರ ಮೊದಲ ಭಾರಿ ಸಾರ್ವಜನಿಕ ಸಮಸ್ಯೆಗಳನ್ನು ಅಲಿಸಿ ಮಾತನಾಡಿದರು. ಚುನಾವಣೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಹಲವಾರು ಕೆಲಸ ಕಾರ್ಯಗಳನ್ನು ನಾನು ಮಾಡಬೇಕಿದೆ. ಹಲವಾರು ಪಕ್ಷದ ಕೆಲ ಮುಖಂಡರು, ನಾಯಕರು ಚುನಾವಣೆಯಲ್ಲಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದರು.ಚುನಾವಣಾ ಸಂದರ್ಭದಲ್ಲಿ ಜನರಿಗೆ ತಪ್ಪು ಸಂದೇಶ ಮೂಲಕ ಸೋಲಿಸಲು ಯತ್ನ ನಡೆಸಿದ್ದರು. ಅಭಿವೃದ್ಧಿ ಕೆಲಸಗಳ ಮುಂದೇ ನನ್ನ ವಿರುದ್ದ ಹೂಡಿದ್ದ ಎಲ್ಲಾ ಸುಳ್ಳಿನ ತಂತ್ರಗಳ ವಿಫಲವಾಗಿದೆ. ಜನರು ಬುದ್ದಿವಂತರು. ವಿಶೇಷವಾಗಿ ಚಳ್ಳಕೆರೆ ಕ್ಷೇತ್ರದ ಜನರು ಬುದ್ದಿಜೀವಿಗಳು ತಮ್ಮ ಕ್ಷೇತ್ರಕ್ಕೆ ಯಾರನ್ನು ಆಯ್ಕೆ ಮಾಡಿಕೊಂಡರೆ ಸೂಕ್ತ ಎಂದು ನಿರ್ಧಾರ ಮಾಡಿಕೊಂಡು ನನ್ನ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ನನಗೆ ಮೂರನೇ ಬಾರಿ ಗೆಲ್ಲಿಸಿಕೊಳ್ಳುವ ಮೂಲಕ ಅಭಿವೃದ್ಧಿ ರಥವನ್ನು ಎಳೆಯಲು ಮತ ಹಾಕಿದ್ದು ಅವರ ನಂಬಿಕೆಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದರು. ಜನರು ನನ್ನ ಮೇಲಿನ ವಿಶ್ವಾಸವಿಟ್ಟು ಗೆಲ್ಲಿಸಿದ್ದಾರೆ. ಅವರ ಋಣು ತೀರಿಸುವ ಕೆಲಸವಾಗಲು ಎಲ್ಲರೂ ಸಹಕರಿಸಿ.
ನಗರದಲ್ಲಿ ಹಲವಾರು ಕಾಮಗಾರಿಗಳು ಅರ್ಥಕ್ಕೆ ನಿಂತಿವೆ ಅವುಗಳ ಪೂರೈಕೆ ಮಾಡುವುದು, ನಗರದಲ್ಲಿ ಯುಜಿಡಿ ಮುಂತಾದ ಕೆಲಸ ಕಾರ್ಯಗಳನ್ನು ಪೂರೈಸುವ ಕಾರ್ಯ ಮಾಡಬೇಕಿದೆ ಎಂದರು.
ಶಾಕರು ಹ್ಯಾಟ್ರಿಕ್ ಸಾಧನೆಯ ನಂತರ ಮೊದಲ ಬಾರಿ ಶಾಸಕರ ಭವನಕ್ಕೆ ಬಂದ ನಂತರ ಹಲವಾರು ಇಲಾಖೆಯ ಅಧಿಕಾರಿಗಳು, ಕಾರ್ಯಕರ್ತರು, ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷೆ, ಸದಸ್ಯರು, ಅಭಿಮಾನಿಗಳು ನೂರಾರು ಕಾರ್ಯಕರ್ತರು ಶಾಸಕರಿಗೆ ಹೂಗುಚ್ಚ ನೀಡಿ, ಸನ್ಮಾನಿಸಿದರು.
[t4b-ticker]
+ There are no comments
Add yours