ಸೇವಾ ನ್ಯೂನ್ಯತೆ: ಕೋರಿಯರ್ ಕಂಪನಿಗೆ ನಷ್ಟ ಪರಿಹಾರ ನೀಡಲು ಆದೇಶ
**********
ಚಿತ್ರದುರ್ಗ(ಕರ್ನಾಟಕ ವಾರ್ತೆ)ಜೂ.08:
ಚಿತ್ರದುರ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಗ್ರಾಹಕ ವಿನಯ್ ಪಿ ಪಾಲೇಕರ್ ನೀಡಿದ ದೂರನ್ನು ಪರಿಶೀಲಿಸಿ, ಚಿತ್ರದುರ್ಗ ಮುಖ್ಯ ಅಂಚೆ ಕಚೇರಿ ರಸ್ತೆಯಲ್ಲಿರುವ ಪ್ರೋಪೇಷನಲ್ ಕೋರಿಯರ್ ಮಾಲೀಕರಿಗೆ ಸೇವಾ ನೂನ್ಯತೆಗಾಗಿ 10 ಸಾವಿರ ನಷ್ಟ ಪರಿಹಾರ ನೀಡಲು ಆದೇಶಿಸಿದೆ. ಜೊತೆಗೆ ಗ್ರಾಹರಿಗೆ 5 ಸಾವಿರ ಮಾನಸಿಕ ಸಂಕಟ ಹಾಗೂ 5 ಸಾವಿರ ವ್ಯಾಜ್ಯ ಪರಿಹಾರದ ಖರ್ಚನ್ನು ನೀಡಲು ತಿಳಿಸಿದೆ.
ವಿನಯ್ ಪಿ ಪಾಲೇಕರ್ ದಿನಾಂಕ 29-07-2019 ರಂದು ಭಟ್ಕಳದ ಸಂಬಂಧಿಗೆ ಕೋರಿಯರ್ ಮೂಲಕ ಸಿಡಿ ಹಾಗೂ ಪೆನ್ಡ್ರೈನ್ ಪಾರ್ಸ್ಲ್ ಮೂಲಕ ಕಳುಹಿಸಿದ್ದರು. ಕೋರಿಯರ್ ಕಂಪನಿ ಪಾರ್ಸಲ್ ತಲುಪಿಸವಲ್ಲಿ ವಿಫಲವಾಗಿತ್ತು. ದಿನಾಂಕ 09-11-2020 ರಂದು ವಿನಯ್ ಪಾಲೇಕರ್ ಗ್ರಾಹಕರ ಆಯೋಗದ ಮೊರೆಹೋಗಿ ದೂರು ದಾಖಲಿಸಿದ್ದರು. ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದೂರನ್ನು ಪರಿಶೀಲಿಸಿ, ಕಂಪನಿಯು ಸೇವೆಯನ್ನು ಒದಗಿಸುವಲ್ಲಿ ವಿಫಲವಾಗಿರುವುದನ್ನು ಕಂಡು ದಂಡ ವಿಧಿಸಿದೆ.
[t4b-ticker]
+ There are no comments
Add yours