ಚಳ್ಳಕೆರೆ-೨೪ ಕಳೆದ ನೂರಾರು ವರ್ಷಗಳಿಂದ ಧಾರ್ಮಿಕ ವಿಚಾರಧಾರೆಗಳ ಮೂಲಕವೇ ಜನರ ಮನಪರಿವರ್ತನಾ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ. ವಿಶೇಷವಾಗಿ ಭಗವಾನ್ ಶ್ರೀಕೃಷ್ಣನ ಆಶೀರ್ವಾದ ಹಾಗೂ ಕೃಪೆಯಿಂದ ಸಮಾಜದಲ್ಲಿ ಶಾಂತಿ ನೆಲೆಸಿದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು, ನಗರದ ವಾಸವಿ ಮಹಾಲ್ನಲ್ಲಿ ಶ್ರೀರಾಧಕೃಷ್ಣರ ಜಯಂತಿ ಹಾಗೂ ಬೆಳ್ಳಿ ರಥೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು ಚಳ್ಳಕೆರೆ ಶ್ರೀಗಿರಿಧಾರಿ ಭಕ್ತಿ ಕೇಂದ್ರದ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಿದ್ದು, ಬೆಳ್ಳಿ ರಥವನ್ನು ಗಿರಿಧಾರಿ ಭಕ್ತಿ ಕೇಂದ್ರದಿAದ ವಾಸವಿ ಮಹಲ್ವರೆಗೂ ನೂರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾಧ್ಯ ಭಜನೆಯೊಂದಿಗೆ ಕರೆತರಲಾಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಬೆಂಗಳೂರಿನ ಶ್ರೀನರಸಿಂಹ ಗಿರಿಧಾರಿ ಮಂದಿರದ ಅಧ್ಯಕ್ಷ ವರದಕೃಷ್ಣದಾಸ, ನಾವೆಲ್ಲರೂ ಇಂತಹ ಮಹಾನ್ ಪುಣ್ಯ ಕಾರ್ಯದಲ್ಲಿ ಭಾಗವಹಿಸುವ ಮೂಲಕ ಭಗವಾನ್ ಶ್ರೀಕೃಷ್ಣನ ಅನುಗ್ರಹಕ್ಕೆ ಪಾತ್ರರಾಗುತ್ತಿದ್ದೇವೆ. ಪ್ರತಿಯೊಬ್ಬ ವ್ಯಕ್ತಿಯೂ ದೇವರ ಭಕ್ತನಾಗಿ ಸಮಾಜದಲ್ಲಿ ಸನ್ಮಾರ್ಗವನ್ನು ಕಂಡುಕೊAಡು ಅದರಲ್ಲಿ ನಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ನೇತಾಜಿ ಪ್ರಸನ್ನಕುಮಾರ್, ನಗರಸಭಾ ಸದಸ್ಯ ಎಂ.ಜೆ.ರಾಘವೇಂದ್ರ, ಜಗದೀಶ್ವರಚಾರ್, ಮೇಟಿಶ್ರೀನಿವಾಸಲು, ಶಿವಣ್ಣ, ಅಶೋಕ್, ಭಾನುಪ್ರಕಾಶ್, ರೇಣುಕಾ, ಮೋಹಿನಿ, ವೀಣಾ, ಮಲ್ಲಿಕಾರ್ಜುನ್, ಸೌಮ್ಯ ಮುಂತಾದವರು ಪಾಲ್ಗೊಂಡಿದ್ದರು.
+ There are no comments
Add yours