ಜೀವವಿಮಾ ನಿಗಮ ದೇಶದ ಆರ್ಥಿಕ ಪರಿಸ್ಥಿತಿ ಸರಿದೂಗಿದ ಒಂದು ಭಾಗ: ಶಾಸಕ ಟಿ.ರಘುಮೂರ್ತಿ

 

ಚಳ್ಳಕೆರೆ-12 ಜೀವವಿಮಾ ನಿಗಮ ದೇಶದ ಆರ್ಥಿಕ ಪರಿಸ್ಥಿತಿ ಸರಿದೂಗಿದ ವ್ಯವಸ್ಥೆಯಲ್ಲಿ ಒಂದಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಅವರು, ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ನಡೆದ ಭಾರತೀಯ ಜೀವವಿಮಾ ಪ್ರತಿನಿಧಿಗಳ ಸಂಘದ ವತಿಯಿಂದ ಸರ್ವ ಸದಸ್ಯರ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. 40ಕೋಟಿ ಜನರು ಜೀವವಿಮಾ ನಿಗಮದಲ್ಲಿ‌ ಪಾಲಿಸಿ ತೆಗೆದುಕೊಳ್ಳುವ ಮೂಲಕ ಕುಟುಂಬ ನಿರ್ವಹಣೆ, ಜೀವನ‌ಭದ್ರತೆಯನ್ನು ಕಂಡಿಕೊಂಡಿದ್ದಾರೆ. ಪ್ರತಿಯೊಂದು ಹಳ್ಳಿಯ ಮನೆ, ಮನೆಗೂ ಜೀವವಿಮಾ ನಿಗಮ ತನ್ನ ಮಹತ್ವವನ್ನು ಬೀರಿದೆ. ಪ್ರತಿಯೊಬ್ಬ ವ್ಯಕ್ತಿಯೂ ನಿಗಮದಲ್ಲಿ ಪಾಲಿಸಿ ಪಡೆದುಕೊಳ್ಳುವ ಮೂಲಕ ತನ್ನ ಜೀವನಕ್ಕೆ ಭದ್ರತೆಯನ್ನು ಒದಗಿಸಿಕೊಂಡಿದ್ದಾನೆ ಎಂದರು‌.
ಈ ಸಂದರ್ಭದಲ್ಲಿ ಜೀವ ವಿಮಾ ಪ್ರತಿನಿಧಿಗಳಾದ ಪರಸಪ್ಪ, ರಂಗಸ್ವಾಮಿ, ಶಂಶಾದ್, ಸರಸ್ವತಮ್ಮ, ಮಂಜುಳಮ್ಮ ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours