ಚಳ್ಳಕೆರೆ-೦೪ ನಾಡಿನೆಲ್ಲೆಡೆ ವಿಶ್ವಹಿರಿಯರ ನಾಗರೀಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಹಿರಿಯರಿಗೆ ಗೌರವವನ್ನು ಸಲ್ಲಿಸಲಾಗುತ್ತಿದೆ. ಹಿರಿಯ ಮಾರ್ಗದರ್ಶನದಿಂದ ಇಂದು ಸಮಾಜ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಹಿರಿಯರ ಕೊಡುಗೆಯನ್ನು ನಾವು ಎಂದೂ ಮರೆಯಲು ಸಾಧ್ಯವಿಲ್ಲವೆಂದು ತಾಲ್ಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ನೇತಾಜಿ ಪ್ರಸನ್ನ ತಿಳಿಸಿದರು.
ಅವರು, ನಗರದ ಬನಶ್ರೀ ವೃದ್ದಾಶ್ರಮದ ಹಿರಿಯರಿಗೆ ಼ಛಾಯಾಗ್ರಾಹಕರ ಸಂಘದಿಂದ ಉಪಹಾರ ಮತ್ತು ಹಣ್ಣು ವಿತರಿಸಿ ಮಾತನಾಡಿದರು. ಹಿರಿಯರು ಎಂದಿಗೂ ಆದರ್ಶಪ್ರಾಯರು, ತಮ್ಮದೇಯಾದ ಚಿಂತನೆಯಲ್ಲಿ ಸಮಾಜಕ್ಕೆ ಮಾರ್ಗದರ್ಶನ ಮಾಡಿದವರು. ಅವರು ಅಂದು ಪಟ್ಟ ಪರಿಶ್ರಮ ಇಂದು ನಾವೆಲ್ಲರೂ ಉತ್ತಮಬದುಕನ್ನು ನಡೆಸಲು ಸಾಧ್ಯವಾಗಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ನಿರ್ದೇಶಕರಾದ ಬಸವರಾಜು, ಬಾಬು, ಓಬಳೇಶ್, ದಿವಾಕರ್, ಅಜಯ್, ಬೈಯಣ್ಣ, ಓಬಣ್ಣ ಮುಂತಾದವರು ಉಪಸ್ಥಿತರಿದ್ದರು. ವೃದ್ದಾಶ್ರಮದ ವ್ಯವಸ್ಥಾಪಕಿ ಮಂಜುಳಾ ಸಿಹಿ,ಹಣ್ಣು ವಿತರಿಸಿದ ಛಾಯಾಗ್ರಾಹಕರ ಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಿದರು.
+ There are no comments
Add yours