ಕೋಟಿ ವೀರನಿಗೆ ಕಾಂಗ್ರೆಸ್ ನಿಂದ ಗೇಟ್ ಪಾಸ್

 

ಬೆಂಗಳೂರು:   ಡಿಕೆಶಿ ಆದ್ರೂ ಅಷ್ಟೇ, ಮತ್ತೊಬ್ರಾದ್ರೂ ಅಷ್ಟೇ, ನಾನ್ ಕ್ಯಾರ್ ಮಾಡಲ್ಲ ಎಂದು ಕಂಟ್ರೋಲ್ ಇಲ್ಲದವರಂತೆ ಕೆಪಿಸಿಸಿ ಕಚೇರಿಲಿ ಬಾಬು ಗಲಾಟೆ ಮಾಡಿದ್ದು, ಗಲಾಟೆ ಮಾಡುತ್ತಿದ್ದ ಬಾಬುಗೆ ಚಚ್ಚಿದ ಕಾಂಗ್ರೆಸ್ ಕಾರ್ಯಕರ್ತರು, 7000 ಕೋಟಿ ಒಡೆಯನಿಗೆ ರುಬ್ಬಿದ್ದಾರೆ. ಡಿಕೆಶಿ ಬಗ್ಗೆ ಅತ್ಯಂತ ಲಘುವಾಗಿ ಮಾತಾಡಿದ್ದ ಬಾಬು, ಲೀಡರ್ಸ್ ಗೆಲ್ಲಲ್ಲ, ಪಾರ್ಟಿ ಸರ್ವನಾಶವಾಗುತ್ತೆ ಎಂದು ಏಕಾಏಕಿ ಕೆಪಿಸಿಸಿ ಕಚೇರಿಗೆ ನುಗ್ಗಿ, ಆಸ್ತಿ ಇದೆ ಎಂದು ದರ್ಪದಲ್ಲಿ ಮಾತನಾಡಿದ್ದರು.

ನಂತರ, ಕೆಜಿಎಫ್​ ಬಾಬುಗೆ ರುಬ್ಬಿದ ಕಾಂಗ್ರೆಸ್ ಕಾರ್ಯಕರ್ತರು, ಕಾಂಗ್ರೆಸ್​ಗೂ ನಿಂಗೂ ಏನ್ ಸಂಬಂಧ ? ಇಲ್ಲಿಗ್ಯಾಕೆ ಬಂದೆ? ನೀನ್ ಏನೇ ಮಾತಾಡೋದಿದ್ರೂ ಚಿಕ್​ಪೇಟೇಲಿ ಮಾತಾಡ್ಕೊ, ನಿನ್ನ ದುಡ್ಡಿನ ದೌಲತ್ತು ಪಾರ್ಟಿಲಿ ನಡೆಯಲ್ಲ ಎಂದು ಆಕ್ರೋಶ ಹೊರ ಹಾಕಿ, ಕಾಂಗ್ರೆಸ್ ಕಚೇರಿಯಿಂದಲೇ ಒದ್ದೋಡಿಸಿದರು. ಮುಖ ಒರೆಸಿಕೊಂಡು ಹೊರಟ 7 ಸಾವಿರ ಕೋಟಿ ಒಡೆಯ ಬಾಬು, ಕೆಲವೇ ನಿಮಿಷಗಳಲ್ಲಿ ಕಾಂಗ್ರೆಸ್​ನಿಂದ ಅಧಿಕೃತವಾಗಿ ಉಚ್ಚಾಟನೆಗೊಂಡಿದ್ದು, ಕಾಂಗ್ರೆಸ್​ನಿಂದಲೂ ಕಿಕ್​ ಔಟ್ ಆಗಲಿದ್ದಾರೆ.

[t4b-ticker]

You May Also Like

More From Author

+ There are no comments

Add yours