ಚಿತ್ರದುರ್ಗ: ನಗರದ ಶ್ರೀ ಅಹೋಬಲ ಟಿವಿಎಸ್ ಶೋ ರೂಂ ಗೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ಶಾಸಕ ಗಣೇಶ್ ಭೇಟಿ ನೀಡಿ ಮಾಲೀಕ ಪಿ.ವಿ.ಅರುಣ್ ಅವರಿಗೆ ಶುಭ ಹಾರೈಸಿದರು.
ಎಲ್ಲಾ ರಂಗಗಳಲ್ಲಿ ಸ್ವರ್ಧೆ ಹೆಚ್ಚುತ್ತಿದ್ದು ಹೋರಟ ಮನೋಭಾವ ಇದ್ದರೆ ಮಾತ್ರ ವ್ಯವಹಾರದಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಜಿಲ್ಲೆಯಲ್ಲಿ ಶ್ರೀ ಅಹೋಬಲ ಟಿವಿಎಸ್ ಉತ್ತಮ ಸಾಧನೆ ಮಾಡುತ್ತ ಮುನ್ನಗುತ್ತಿದ್ದು ಸಹೋದರ ಅರುಣ್ ಕಡಿಮೆ ವಯಸ್ಸಿನಲ್ಲಿ ಉತ್ತಮ ಸ್ವರ್ಧೆ ನೀಡುತ್ತ ಸಾಗುತ್ತಿದ್ದಾರೆ. ಅವರಿಗೆ ಎಲ್ಲಾರೂ ಕೈ ಹಿಡಿದು ನಡೆಸಿದರೆ ನೂರಾರು ಜನರಿಗೆ ಉದ್ಯೋಗ ನೀಡುವ ಮುನ್ಸೂಚನೆ ಇದೆ ಎಂದರು.ಅರುಣ್ ಅವರಿಗೆ ಮುಂದಿನ ದಿನಗಳಲ್ಲಿ ತಮ್ಮಶೋ ರೂಂ ಬೆಳವಣಿಗೆ ಹೊಂದಲಿ ಎಂದು ಶುಭ ಕೋರಿದರು. ಈ ಸಂದರ್ಭದಲ್ಲಿ ಮಾಲೀಕ್ ಅರುಣ್, ಪೋಲಿಸ್ ರವಿ ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.
[t4b-ticker]
+ There are no comments
Add yours