ಚಿತ್ರದುರ್ಗ: ಚಿತ್ರದುರ್ಗ ಪಕ್ಷೇತರ ಅಭ್ಯರ್ಥಿ ಸೌಭಾಗ್ಯ ಕಣದಿಂದ ನಿವೃತ್ತಿಯಾಗಿ ಬಿಜೆಪಿ ಅಭ್ಯರ್ಥಿ ಜಿ.ಹೆಚ್.ತಿಪ್ಪಾರೆಡ್ಡಿಗೆ ಬೆಂಬಲ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು ಇಂದು ಸಂಜೆ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರುವ ಸಾಧ್ಯತೆ ಇದೆ?
ಸೌಭಾಗ್ಯ ಬಸವರಾಜನ್ ಮನೆಗೆ ತಿಪ್ಪಾರೆಡ್ಡಿ ಭೇಟಿ ನೀಡಿ ಗೌಪ್ಯ ಮಾತುಕತೆ ನಡಸಿದ್ದಾರೆ ಎಂದು ತಿಳಿದಿದೆ.
ಮಾಜಿ ಶಾಸಕ ಎಸ್ ಕೆ ಬಸವರಾಜನ್ ಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ಧ ಬಂಡಾಯ ಸಾರಿದ್ದ ಎಸ್.ಕೆ.ಬಸವರಾಜನ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಪತ್ನಿ ಸೌಭಾಗ್ಯ ಕಣಕ್ಕಿಳಿಸಿದ್ದ ಬಸವರಾಜನ್ ಅವರು ಒಂದು ಸುತ್ತಿನ ಪ್ರಚಾರ ಸಹ ನಡೆಸಿದ್ದರು.
ಕಾಂಗ್ರೆಸ್ ಗೆ ಠಕ್ಕರ್ ಕೊಡಲು ಒಂದಾದ ಪಕ್ಷೇತರ ಅಭ್ಯರ್ಥಿ ಸೌಭಾಗ್ಯ, ಬಿಜೆಪಿ ಅಭ್ಯರ್ಥಿ ಜಿ.ಹೆಚ್.ತಿಪ್ಪಾರೆಡ್ಡಿ ಎಂದು ಹೇಳಲಾಗುತ್ತಿದ್ದು ಅಧಿಕೃತವಾಗಿ ಘೋಷಣೆ ಬಾಕಿ ಇದೆ..
[t4b-ticker]
+ There are no comments
Add yours