ಚಿತ್ರದುರ್ಗ :- ಬೊಮ್ಮೇನಹಳ್ಳಿ ಸಮೀಪದ ಕಡ್ಲೆಗುದ್ದುವಿನಲ್ಲಿ ನೂತವಾಗಿ ಪ್ರಾರಂಭವಾಗಿರುವ ಇಂದಿರಾಗಾಂಧಿ ವಸತಿ ಶಾಲೆಗೆ ಚಿತ್ರದುರ್ಗ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀ ಮತಿ ಡಾ. ನಾಗವೇಣಿ ಇವರು ಅನಿರೀಕ್ಷಿತವಾಗಿ ಬೇಟಿ ನೀಡಿದರು ಈ ಸಂದರ್ಭದಲ್ಲಿ ಅವರು ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳಿಗೆ ಬೇಟಿ ನೀಡಿ ಪರಿಶೀಲಿಸಿದ ನಂತರ ಅಡುಗೆ ಕೋಣೆಗೂ ತೆರಳಿ ದಾಸ್ತಾನು ಮತ್ತು ತರಕಾರಿಗಳನ್ನು ಪರಿಶೀಲಿಸಿ ಅಲ್ಲಿಯೆ ಊಟವನ್ನು ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು ನಂತರ ತಾವು ಈ ಹಿಂದೆ ಕೆಲಸ ನಿರ್ವಹಿಸಿದ ತಾಲೂಕಿನ ವಸತಿ ಶಾಲೆಗಳಲ್ಲಿ ಆದ ಸಮಸ್ಯೆಗಳನ್ನು ವಿವರಿಸುತ್ತಾ ಎಲ್ಲರೂ ಜಾಗರೂಕತೆಯಿಂದ ಕೆಲಸ ನಿರ್ವಹಿಸಿ ಹಾಗೂ ವಸತಿ ಶಾಲೆಯಲ್ಲಿ ಮಕ್ಕಳಿಗೆ ತಮ್ಮ ಸ್ವಂತ ಮನೆಯಲ್ಲಿ ಇರುವ ಅನುಭವ ಬರುವಂತಹ ರೀತಿಯಲ್ಲಿ ಸಿಬ್ಬಂದಿಯವರು ಅವರೂಂದಿಗೆ ವರ್ತಿಸಬೇಕು ಕಾರಣ ವಿದ್ಯಾರ್ಥಿಗಳು ಮನೆಯನ್ನು ಬಿಟ್ಟು ಇಲ್ಲಿರುವುದರಿಂದ ಅವರಿಗೆ ಮನೆಯ ಯೋಚನೆ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ ಅದರಲ್ಲೂ ಇದೀಗ ಆರನೇ ತರಗತಿಗೆ ಸೇರಿ ಬರುವ ಮಕ್ಕಳ ಬಗ್ಗೆ ಅತೀವ ಕಾಳಜಿ ವಹಿಸಬೇಕು ಮತ್ತು ಉತ್ತಮ ಶಿಕ್ಷಣವನ್ನ ನೀಡಬೇಕೆಂದು ಸಲಹೆ ಸೂಚನೆಗಳನ್ನು ನೀಡಿದರು ನಂತರ ವಿದ್ಯಾರ್ಥಿಗಳೂಂದಿಗೆ ಸಮಲೋಚನೆ ನಡೆಸಿ ವಿದ್ಯಾಭ್ಯಾಸದ ಹೆಚ್ಚಿನ ಗಮನ ಹರಿಸುವಂತೆ ಕಿವಿ ಮಾತುಗಳನ್ನು ಹೇಳಿದರು. ಸಂದರ್ಭದಲ್ಲಿ ವಸತಿ ಶಾಲಾ ಪ್ರಾಂಶುಪಾಲರಾದ ಶ್ರೀ ರಮೇಶ್ ಆರ್ , ನಿಲಯಪಾಲಕರು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.
[t4b-ticker]
+ There are no comments
Add yours