ಶ್ರೀಲಂಕಾ ವಿರುದ್ದ ಭಾರತಕ್ಕೆ 2.0 ಅಂತರದಿಂದ ಸರಣಿ ವಶ

 

ಕೋಲ್ಕತಾ: ಪ್ರವಾಸಿ ಶ್ರೀಲಂಕಾ ವಿರುದ್ಧದ ಏಕ ದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್​ಗಳ ಸುಲಭ ಜಯ ಸಾಧಿಸಿದೆ. ಈ ಮೂಲಕ ಆತಿಥೇಯ ಭಾರತ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು 2-0 ಅಂತರದಿಂದ ಕೈವಶ ಮಾಡಿಕೊಂಡಿತು.

ತಿರುವನಂತಪುರದಲ್ಲಿ ಜನವರಿ 15ರಂದು ಕೊನೇ ಪಂದ್ಯ ನಡೆಯಲಿದೆ.

ಇಲ್ಲಿನ ಈಡನ್​ ಗಾರ್ಡನ್ಸ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಗುರುವಾರ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್​ ಮಾಡಿದ ಶ್ರೀಲಂಕಾ ತಂಡ 39.4 ಓವರ್​ಗಳಲ್ಲಿ 215 ರನ್​ಗಳಿಗೆ ಆಲ್​ಔಟ್​ ಆಯಿತು. ಗುರಿ ಬೆನ್ನಟ್ಟಿದ ಭಾರತ ತಂಡ 43. ಓವರ್​ಗಳಲ್ಲಿ 6 ವಿಕೆಟ್​ಗೆ 219 ರನ್​ ಬಾರಿಸಿ ಗೆಲುವು ಕಂಡಿತು. ಆರಂಭದಲ್ಲಿ ಭಾರತ ಬ್ಯಾಟಿಂಗ್​ನಲ್ಲಿ ವೈಫಲ್ಯ ಕಂಡ ಹೊರತಾಗಿಯೂ ಕೆ ಎಲ್​ ರಾಹುಲ್ (64) ಅಜೇಯ ಅರ್ಧ ಶತಕ ಬಾರಿಸಿ ತಂಡವನ್ನು ಗೆಲ್ಲಿಸಿದರು.

ಸಣ್ಣ ಗುರಿಯನ್ನು ಬೆನ್ನಟ್ಟಲು ಹೊರಟ ಭಾರತ ತಂಡದ ಸತತವಾಗಿ ವಿಕೆಟ್​ಗಳನ್ನು ಕಳೆದುಕೊಂಡಿತು. ಶ್ರೇಯಸ್ ಅಯ್ಯರ್​ (28) ಮಧ್ಯಮ ಕ್ರಮಾಂಕದಲ್ಲಿ ಸ್ವಲ್ಪ ಹೊತ್ತು ಕ್ರೀಸ್​ನಲ್ಲಿ ನಿಂತರು. ಬಳಿಕ ಹಾರ್ದಿಕ್ ಪಾಂಡ್ಯ (36) ರಾಹುಲ್​ ಜತೆ ಸೇರಿ ಮಧ್ಯಮ ಕ್ರಮಾಂಕದಲ್ಲಿ 75 ರನ್​ಗಳ ಜತೆಯಾಟ ನೀಡಿದರು. ಇದು ಭಾರತ ತಂಡದ ಪಾಲಿನ ವಿಜಯ ಜತೆಯಾಟ ಎನಿಸಿಕೊಂಡಿತು. ಬಳಿಕ ಅಕ್ಷರ್ ಪಟೇಲ್​ 21 ರನ್​ಗಳ ಕೊಡುಗೆ ಕೊಟ್ಟರು.

[t4b-ticker]

You May Also Like

More From Author

+ There are no comments

Add yours