ಒಳ್ಳೆ ಕೆಲಸ ಮಾಡಿದರೆ ಮನುಷ್ಯ ಜನ್ಮ ಪ್ರಾಪ್ತಿಯಾಗುತ್ತದೆ:ಎಂ.ಚಂದ್ರಪ್ಪ

 

ಹೊಳಲ್ಕೆರೆ : ಒಳ್ಳೆ ಕೆಲಸ ಮಾಡಿದರೆ ಮನುಷ್ಯ ಜನ್ಮ ಪ್ರಾಪ್ತಿಯಾಗುತ್ತದೆ. ದೈವ ಕೃಪೆಯಿದ್ದರೆ ಉತ್ತಮ ಸ್ಥಿತಿಯಲ್ಲಿರಬಹುದು ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

ತಾಲ್ಲೂಕಿನ ಲೋಕದೊಳಲು ಗ್ರಾಮದಲ್ಲಿ ದೊಡ್ಡಹೊಟ್ಟೆ ರಂಗನಾಥಸ್ವಾಮಿಯ ಬೆಟ್ಟದ ಮೇಲಿನ ನೂತನ ದೇವಾಲಯ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ದಿನೆ ದಿನೆ ಭಕ್ತರ ಸಂಖ್ಯೆ ಜಾಸ್ತಿಯಾಗುತ್ತಿರುವುದರಿಂದ ದೇವಸ್ಥಾನಕ್ಕೆ ಬಂದು ಹೋಗುವವರಿಗೆ ಅನುಕೂಲವಾಗಲಿ ಎನ್ನುವ ದೃಷ್ಠಿಯಿಂದ ಮೆಟ್ಟಿಲು ನಿರ್ಮಾಣಕ್ಕೆ ಮೂರು ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದೇನೆ. ನೀವುಗಳು ಅಂದುಕೊಂಡಷ್ಠು ಸುಲಭವಲ್ಲ. ದೊಡ್ಡ ಸರೋವರದ ರೀತಿಯಲ್ಲಿತ್ತು. ಈ ಕೆಲಸ ಮಾಡಲು ಬರುವವರೆಲ್ಲಾ ಅಬ್ಬಬ್ಬಾ ಎಂದು ಹೆದರಿಕೊಂಡು ವಾಪಸ್ ಹೋಗುತ್ತಿದ್ದರು. ಚಿಕ್ಕಂದವಾಡಿಯ ಗುತ್ತಿಗೆದಾರ ರಾಜಣ್ಣನನ್ನು ಕರೆಸಿಕೊಂಡು ಮೆಟ್ಟಿಲು ನಿರ್ಮಾಣ ಮಾಡುವಂತೆ ಹೇಳಿದ ಪರಿಣಾಮ ಒಪ್ಪಿಕೊಂಡಿದ್ದಾನೆ. ಸರ್ಕಾರದಿಂದ ಹಣ ಕೊಡಿಸುತ್ತೇನೆ. ವೈಯಕ್ತಿಕವಾಗಿಯೂ ಹಣಕಾಸಿನ ನೆರವು ನೀಡುತ್ತೇನೆ. ದೊಡ್ಡ ಪ್ರಾಜೆಕ್ಟ್ ಹಾಕಿಕೊಂಡಿದ್ದೀರಿ. ಐದು ಕೋಟಿ ರೂ.ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣ ಮಾಡುವಷ್ಟು ಅವಕಾಶವಿಲ್ಲ. ಹಾಸಿಗೆಯಿದ್ದಷ್ಟು ಕಾಲು ಚಾಚಬೇಕು ಎಂದು ತಿಳಿಸಿದರು.
ಪುಣ್ಯ ಸಾರ್ಥಕವಾದ ಕೆಲಸ ಮಾಡಿದರೆ ಪರಮಾತ್ಮ ಒಂದಲ್ಲ ಒಂದು ರೀತಿಯಲ್ಲಿ ಕಾಪಾಡುತ್ತಾನೆ. ಹಾಗಾಗಿ ದೇವಸ್ಥಾನಕ್ಕೆ ಮೆಟ್ಟಿಲು ನಿರ್ಮಿಸಲು ಹಣ ಮಂಜೂರು ಮಾಡಿದ್ದೇನೆ. ಟಾರ್ ರಸ್ತೆಗೆ ಐವತ್ತು ಲಕ್ಷ ರೂ.ಗಳನ್ನು ಇಟ್ಟಿದ್ದೇನೆ. ಒಟ್ಟಾರೆ ಈ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದೆನ್ನುವುದು ನನ್ನ ಉದ್ದೇಶ ಎಂದರು.
ದೊಡ್ಡಹೊಟ್ಟೆ ರಂಗನಾಥಸ್ವಾಮಿ ದೇವಸ್ಥಾನ ಟ್ರಸ್ಟ್‍ನ ಅಧ್ಯಕ್ಷ ಚಂದ್ರಶೇಖರ್, ಗೌರವಾಧ್ಯಕ್ಷ ಟಿ.ತಿಮ್ಮಪ್ಪ, ಗವಿರಂಗಪ್ಪ, ಕುಮಾರಪ್ಪ, ತಿಪ್ಪೇಸ್ವಾಮಿ, ಉಮೇಶ್, ರಂಗಸ್ವಾಮಿ, ತಿಮ್ಮೇಶ್, ಕೃಷ್ಣಮೂರ್ತಿ, ಗಿರೀಶ್, ತ್ಯಾಗರಾಜ, ದೇವಸ್ಥಾನ ಕಮಿಟಿಯ ಸದಸ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours