ಚಳ್ಳಕೆರೆ: ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿಯಲ್ಲಿ ಶಾಸಕ ಟಿ ರಘುಮೂರ್ತಿ ಅವರ ಸಮ್ಮುಖದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಚಳ್ಳಕೆರೆ ತಾಲೂಕಿನ ಪರಶುರಾಂಪುರ ಪುಟ್ಲಾರಹಳ್ಳಿ, ಜಾಜುರು, ಗ್ರಾಮಗಳ ಜೆ.ಡಿ.ಎಸ್ ಮತ್ತು ಬಿ.ಜೆ.ಪಿ. ಪಕ್ಷದ ಯುವ ಕಾರ್ಯಕರ್ತರು ಮತ್ತು ಮುಖಂಡರುಗಳಾದ ಅಜಯ್, ಸಂದೀಪ್, ಪ್ರಕಾಶ್, ಸೋಮು, ಮಂಜು, ಮಹೇಂದ್ರ, ಚೆಲ್ಮೇಶ್ , ಗೌಸ್ ಪೀರ್, ಶಿವರಾಜ್, ಸಿದ್ದು, ಪ್ರಹ್ಲಾದ್, ಅಭಿ, ಪವನ್, ಬಸವರಾಜ್, ಸುದರ್ಶನ್, ಭರತ್, ಮಂಜುನಾಥ, ಉಮೇಶ್, ಮಂಜು, ಮಂಜು, ದಿಲೀಪ್, ಶಿವಕುಮಾರ್, ಪೆದ್ನಯ್ಯ, ಮಾನ್ಯ ಶಾಸಕರ ಕಾರ್ಯವೈಖರಿಯನ್ನು ಮೆಚ್ಚಿ ಹಾಗೂ ಕಾಂಗ್ರೆಸ್ ಪಕ್ಷದ ಪಕ್ಷ ಸಿದ್ದಾಂತಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಶಾಸಕರು ಎಲ್ಲಾ ಮುಖಂಡರು ಕಾರ್ಯಕರ್ತರನ್ನು ಸನ್ಮಾನಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೆ ಎಲ್ಲಾ ವರ್ಗದ ಜನರು ಅಧಿಕಾರಕ್ಕೆ ಬಂದಂತೆ ಆಗುತ್ತದೆ. ಸರ್ವ ಜನಾಂಗದ ಜನರಿಗೆ ಕೈ ಹಿಡಿಯುವ ಮೂಲಕ ನ್ಯಾಯವನ್ನು ಒದಗಿಸುತ್ತಿವೆ. ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದುರಾಡಳಿತದಿಂದ ಜನರು ಬೇಸತ್ತಿದ್ದು ಕಾಂಗ್ರೆಸ್ ಪಕ್ಷಕ್ಕೆ ಜನರು ಸ್ವಯಂ ಸೇರ್ಪಡೆ ಆಗುತ್ತಿದ್ದು ಕಾಂಗ್ರೆಸ್ ಶಕ್ತಿ ಮತ್ತಷ್ಟು ಹೆಚ್ಚುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಘವೇಂದ್ರ, ಯುವ ಕಾಂಗ್ರೆಸ್ ಅಧ್ಯಕ್ಷರುಗಳಾದ ಶಿವಕುಮಾರ ಸ್ವಾಮೀ , ಬಾಬು, ಕಿಸಾನ್ ಸೆಲ್ ಜಿಲ್ಲಾಧ್ಯಕ್ಷರಾದ ನಾಗರಾಜ್, ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಜಗಳೂರು ಸ್ವಾಮಿ, ಸದಸ್ಯರುಗಳಾದ ರುದ್ರೇಶ್, ಶ್ರೀನಿವಾಸ್, ಮುಖಂಡರುಗಳಾದ ಕೇಶವಣ್ಣ, ನಾಗಭೂಷಣ, ಗುಜ್ಜಾರಪ್ಪ, ಚೆಲ್ಮೇಶ್, ಬಸವರಾಜ್, ಕೃಷ್ಣಮೂರ್ತಿ, ತಿಪ್ಪೇಸ್ವಾಮಿ, ಅನಿಲ್, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
[t4b-ticker]
+ There are no comments
Add yours