ಯುವನಿಧಿ ಕಾರ್ಯಕ್ರಮಕ್ಕೆ ಪದವಿ ವಿದ್ಯಾರ್ಥಿಗಳು| ಬಿಜೆಪಿ ಯುವ ಮೋರ್ಚಾ ಖಂಡನೆ.

 

 

ಚಿತ್ರದುರ್ಗ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲೊಂದಾದ “ಯುವನಿಧಿ ಉದ್ಘಾಟನಾ ಕಾರ್ಯಕ್ರಮ” ಕ್ಕೆ ಪದವಿ ವಿಧ್ಯಾರ್ಥಿಗಳನ್ನು ಸಾರಿಗೆ ವ್ಯವಸ್ಥೆ ಮಾಡಿ ಕರೆದುಕೊಂಡು ಹೋಗುತ್ತಿರುವುದನ್ನು ಚಿತ್ರದುರ್ಗ ಭಾಜಪ ಯುವ ಮೋರ್ಚಾ ಖಂಡಿಸುತ್ತದೆ.

ಪದವಿ/ಡಿಪ್ಲಮೋ ಮುಗಿಸಿ 6 ತಿಂಗಳಾದ ಫಲಾನುಭವಿಗಳಿಗೆ ಇರುವ ಯೋಜನೆಗೆ ಪ್ರಸ್ತುತ ಪದವಿ ಕಾಲೇಜಿನ ವಿಧ್ಯಾರ್ಥಿಗಳನ್ನು ಕರೆದುಕೊಂಡು ಹೋಗುವುದರಿಂದ ಅವರನ್ನು ನಿರುದ್ಯೋಗಿಯನ್ನಾಗಿಸುವ ಚಿಂತನೆಗೆ ದೂಡುತ್ತದೆ ಅದಲ್ಲದೆ ಶೈಕ್ಷಣಿಕ ವರ್ಷದ ಪರೀಕ್ಷೆ ಸಮಯದಲ್ಲಿ ಅವರುಗಳನ್ನು ರಾಜಕೀಯ ಕಾರ್ಯಕ್ರಮ ಕ್ಕೆ ಉಪಯೋಗಿಸುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸುತ್ತೇವೆ.

ಇದನ್ನೂ ಓದಿ: ಮನೆ ಕಾಪೌಂಡನಲ್ಲಿ ಗಾಂಜಾ ಗಿಡ | ಅಧಿಕಾರಿ ಭೇಟಿ |ಆರೋಪಿ ಪರಾರಿ
“ಕೋಮುಲ್ ನೇಮಕಾತಿ”ಯಲ್ಲಿ ಭ್ರಷ್ಟಾಚಾರ ನೆಡೆದು ಮಾಲೂರು ಕಾಂಗ್ರೇಸ್ ಶಾಸಕ ನಂಜೇಗೌಡ ಪ್ರತಿ ನೇಮಕಾತಿಗೆ 30ಲಕ್ಷ ಪಡೆದಿರುವುದು ಇ ಡಿ ದಾಳಿಯಿಂದ ತಿಳಿದಿದೆ ಇದರೊಂದಿಗೆ..” ಬಡವರ ಮಕ್ಕಳಿಗೆ 2000 ರೂ ನ ಯುವನಿಧಿ ಆಸೆ ತೋರಿಸಿ ನೇಮಕಾತಿಯಲ್ಲಿ ಸಿರಿವಂತರಿಗೆ – ಭ್ರಷ್ಟಾಚಾರಿಗಳಿಗೆ ಮಣೆ ಹಾಕುವುದು ಇದು ಕಾಂಗ್ರೇಸ್ ಸಂಸ್ಕೃತಿ.

– *ಕಾಲುವೇಹಳ್ಳಿ ಪಾಲಯ್ಯ*
ಭಾಜಪ ಯುವ ಮೋರ್ಚಾ ಜಿಲ್ಲಾಧ್ಯಕ್ಷ

[t4b-ticker]

You May Also Like

More From Author

+ There are no comments

Add yours