ಚಿತ್ರದುರ್ಗ:ನಗರದ ಸರ್ಕಾರಿ ವೃತ್ತಿಪರ ಬಾಲಕಿಯರ ಕಾಲೇಜು ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾ ಪಂಚಾಯತ ಸಿಇಓ ಎಂ.ಎಸ್.ದಿವಾಕರ್ ಅವರ ನೇತೃತ್ವದ ತಂಡವಾದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಸಮಾಜ ಜಗದೀಶ್ ಹೆಬ್ಬಳ್ಳಿ , ಹಾಗೂ ಸಹಾಯಕ ನಿರ್ದೇಶಕರು ಗ್ರೇಡ್ 1 ಓ. ಪರಮೇಶ್ವರಪ್ಪ ಅವರು ಚಿತ್ರದುರ್ಗ ಸ್ವೀಪ್ ತಂಡದೊಂದಿಗೆ ಆಗಮಿಸಿ ವಿದ್ಯಾರ್ಥಿ ನಿಲಯದಲ್ಲಿ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ಮತದಾನ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು, ವಿದ್ಯಾರ್ಥಿಗಳಿಂದ ಪೋಷಕರಿಗೆ ಕಡ್ಡಾಯವಾಗಿ ಮತದಾನ ಮಾಡುವಂತೆ ಕಾಗದ ಪತ್ರಗಳನ್ನು ಬರೆಸಿ ಎಲ್ಲಾ ವಿದ್ಯಾರ್ಥಿಗಳೊಂದಿಗೆ ಪ್ರತಿಜ್ಞಾ ವಿಧಿ ಸ್ವೀಕರಿಸುವುದರೊಂದಿಗೆ”ನಮ್ಮ ಮತ ನಮ್ಮ ಭವಿಷ್ಯ ನಮ್ಮ ಮತ ನಮ್ಮ ಹಕ್ಕು””ನಮ್ಮ ಮತದಲ್ಲಿ ಅಡಗಿದೆ ಜನಹಿತ”ಎಂಬ ಧ್ಯೇಯ ವಾಕ್ಯ ದೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು ಹಾಗೂ ವಿದ್ಯಾರ್ಥಿಗಳಿಗೆ ಉತ್ತಮವಾಗಿ ವಿದ್ಯಾಭ್ಯಾಸ ಮಾಡುವಂತೆ ಸಲಹೆ ಸೂಚನೆಗಳನ್ನು ನೀಡಿದರು.
[t4b-ticker]
+ There are no comments
Add yours