ಭರಮಸಾಗರ: ಚಿತ್ರದುರ್ಗ ತಾಲೂಕಿನ ದಂಡಿನಕುರುಬರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಜಾನಪದ ಹಾಡುಗಾರ ಕಾಲ್ಕೆರೆ ಚಂದ್ರಪ್ಪ (51) ರವರು ಅನಾರೋಗ್ಯ ದ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಯ ಲ್ಲಿ ಭಾನುವಾರ ನಿಧನರಾಗಿದ್ದಾರೆ.
ಮೃತರು ಪತ್ನಿ, ಒರ್ವ ಪುತ್ರ , ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧುಬಳಗವನ್ನು ಬಿಟ್ಟು ಅಗಲೀದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರು ಆಗಿದ್ದ ಚಂದ್ರಪ್ಪ ನವರು ವೃತ್ತಿಯಿಂದ ಶಿಕ್ಷಕರಾಗಿ ಪ್ರವೃತ್ತಿಯಿಂದ ಜಾನಪದ ಹಾಡುಗಾರರಾಗಿ ಶಿಕ್ಷಕರ ಸಭೆ ಸಮಾರಂಭಗಳಲ್ಲಿ ತಮ್ಮ ಹಾಡುಗಳಿಂದ ಗಮನಸೆಳೆಯುತ್ತಿದ್ದ ಅದ್ಭುತ ಪ್ರತಿಭೆ ಆಗಿದ್ದರು.
ಮೃತರ ಅಂತ್ಯ ಸಂಸ್ಕಾರ ಹೊಳಲ್ಕೆರೆ ತಾಲೂಕಿನ ಕಾಲ್ಕೆರೆ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಚಿತ್ರದುರ್ಗ ದ ಸಮಸ್ತ ಶಿಕ್ಷಕ ವೃಂದದವರು, ಜಿಲ್ಲೆಯ ಕಲಾವಿದರ ವೇದಿಕೆ ಸೇರಿಂದತೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ದಂಡಿನ ಕುರುಬರಹಟ್ಟಿ ಶಾಲಾ ವೃಂದ ಮತ್ತು ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ
[t4b-ticker]
+ There are no comments
Add yours