ಚಿತ್ರದುರ್ಗ🙁chitradurga)
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ 2024ನೇ ಸಾಲಿಗೆ ವಿಕಲಚೇತನರ ರಿಯಾಯಿತಿ ದರದ ಬಸ್ಪಾಸ್ಗೆ ಹೊಸದಾಗಿ ಹಾಗೂ ನವೀಕರಣಕ್ಕಾಗಿ ಸೇವಾಸಿಂಧು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಸೇವಾಸಿಂಧು ಪೋರ್ಟ್ಲ್ https://serviceonline.gov.in/
ಇದನ್ನೂ ಓದಿ:ಚಿತ್ರದುರ್ಗ:ಹೊಸ ವರ್ಷಕ್ಕೆ ಏಳು ಸುತ್ತಿನ ಕೋಟೆಗೆ ಪ್ರವಾಸಿಗರ ಲಗ್ಗೆ
2023ನೇ ಸಾಲಿಗೆ ನೀಡಲಾಗಿದ್ದ ಪಾಸುಗಳ ಅವಧಿ ಡಿ.31ಕ್ಕೆ ಮುಕ್ತಾಯವಾಗಿದ್ದು, ಪಾಸುಗಳ ನವೀಕರಣಕ್ಕೆ ಕಾಲವಕಾಶ ನೀಡಿ ಫೆ.29ವರೆಗೆ ಹಳೆ ಪಾಸುಗಳ ಮಾನ್ಯತೆಯನ್ನು ಮುಂದುವರಿಸಲಾಗಿದೆ. ಆನ್ಲೈನ್ನಲ್ಲಿ ಯುಡಿಐಡಿ, ಆಧಾರ್, ವಿಕಲಚೇತನ ಪ್ರಮಾಣ ಪತ್ರ ಹಾಗೂ ಫೋಟೋಗಳನ್ನು ಅಪ್ಲೋಡ್ ಮಾಡಬೇಕು. ಹೀಗೆ ಆನ್ಲೈನ್ನಲ್ಲಿ ಅಪೌಲೋಡ್ ಮಾಡಿದ ಮೂಲ ದಾಖಲೆ ಹಾಗೂ ಅವುಗಳ ಜೆರಾಕ್ಸ್ ಪ್ರತಿಗಳನ್ನು ಭೌತಿಕವಾಗಿ ಪಾಸುಗಳನ್ನು ಪಡೆಯುವ ಸಂದರ್ಭದಲ್ಲಿ ಹಾಜರುಪಡಿಸಬೇಕು. ಫೆ.29 ಒಳಗಾಗಿ ಹಳೆಯ ಪಾಸುಗಳ ನವೀಕರಣ ಮಾಡಿಸುವುದು ಕಡ್ಡಾಯವಾಗಿದೆ.
ಚಿತ್ರದುರ್ಗ,ಹೊಳಲ್ಕೆರೆ ಹಾಗೂ ಹಿರಿಯೂರು ತಾಲ್ಲೂಕಿನ ಫಲಾನುಭವಿಗಳಿಗೆ ಚಿತ್ರದುರ್ಗ ಬಸ್ ನಿಲ್ದಾಣ, ಚಳ್ಳಕೆರೆ ಮೊಳಕಾಲ್ಮೂರು ಫಲಾನುಭವಿಗಳಿಗೆ ಚಳ್ಳಕೆರೆ ಬಸ್ ನಿಲ್ದಾಣ, ಹೊಸದುರ್ಗ ಫಲಾನುಭವಿಗಳಿಗೆ ಹೊಸದುರ್ಗ ಹಾಗೂ ಪಾವಗಡ ಫಲಾನುಭವಿಗಳಿಗೆ ಪಾವಗಡ ಬಸ್ ನಿಲ್ದಾಣಗಳಲ್ಲಿ ಪಾಸುಗಳನ್ನು ವಿತರಿಸಲಾಗುವುದು ಎಂದು ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
+ There are no comments
Add yours