ಇಷ್ಟಪಟ್ಟು ತಿನ್ನುತ್ತಿದ್ದ ಎಗ್ ಬಜ್ಜಿ ಪ್ರಾಣನೇ ತೆಗೆಯಿತು

 

 

ತೆಲಂಗಾಣ : ಕೆಲವೊಮ್ಮೆ ನಾವು ಇಷ್ಟಪಟ್ಟು ತಿನ್ನುವ ತಿಂಡಿಯೇ ನಮ್ಮ ಜೀವ ತೆಗೆದರೆ, ಅದಕ್ಕಿಂದ ದುರ್ಗತಿ ಮತ್ತೊಂದಿಲ್ಲ. ತೆಲಂಗಾಣದಲ್ಲಿ ಇಂಥದ್ದೇ ಒಂದು ಘಟನೆ ನಡೆದಿದ್ದು, ತುಂಬಾಾ ಇಷ್ಟಪಟ್ಟು ತಿನ್ನುತ್ತಿದ್ದ ಎಗ್ ಬಜ್ಜಿ, ಗಂಟಲಿಗೆ ಸಿಕ್ಕಿಹಾಕಿಕೊಂಡು, ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.

ವನಪರ್ತಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯೋರ್ವ ಬಜ್ಜಿ ಅಂಗಡಿ ಎದುರು ಪತ್ನಿಯೊಂದಿಗೆ ಎಗ್ ಬಜ್ಜಿ ತಿನ್ನುತ್ತ ಕುಳಿತಿದ್ದ. ಇದ್ದಕ್ಕಿದ್ದಂತೆ ಆತನಿಗೆ ಎಗ್ ಬಜ್ಜಿ ಗಂಟಲಿಗೆ ಸಿಕ್ಕಿಹಾಕಿಕೊಂಡು, ಉಸಿರಾಟಕ್ಕೆ ತೊಂದರೆಯಾಗಿದೆ. ಪತ್ನಿ ಎಷ್ಟೇ ಪ್ರಯತ್ನಿಸಿದರೂ, ಆ ಬಜ್ಜಿ ಹೊರತೆಗೆಯಲಾಗಲಿಲ್ಲ. ಹಲವು ಪ್ರಯತ್ನ ಮಾಡಿದರೂ, ಆತ ಉಸಿರಾಡಲಾಗದೇ, ಕಷ್ಟಪಡುತ್ತಿದ್ದ. ಅಲ್ಲಿದ್ದ ಕೆಲವರು, ಸಾಕಷ್ಟು ಪ್ರಯತ್ನಿಸಿ, ಆ ವ್ಯಕ್ತಿಯ ಗಂಟಲಿನಲ್ಲಿ ಸಿಕ್ಕಿ ಹಾಕಿಕೊಂಡಿರುವ ಬಜ್ಜಿ ತೆಗೆದಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ, ಆ ವ್ಯಕ್ತಿ ಸಾವನ್ನಪ್ಪಿದ್ದಾನೆ. ಈ ಮೂಲಕ ಸಾವು ಬರುವುದಿದ್ದರೆ, ಹೇಗೂ ಬರುತ್ತದೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.

ಕೆಲ ವರ್ಷಗಳ ಹಿಂದೆ ಶಿಕ್ಷಕಿಯೊಬ್ಬಳು ಶಾಲೆಯಲ್ಲಿ ಪೂಜೆ ಬಳಿಕ ಪ್ರಸಾದ ಸೇವಿಸಿದಾಗ, ತೆಂಗಿನ ಕಾಯಿಯ ಗೆರಟೆ ಪೀಸ್ ಗಂಟಲಿಗೆ ಸಿಕ್ಕಿಹಾಕಿಕೊಂಡು ಸಾವನ್ನಪ್ಪಿದ್ದಳು. ಕಾಪಾಡಬೇಕಿದ್ದ ಪ್ರಸಾದ ಸೇವನೆಯೇ ಆಕೆಯ ಪ್ರಾಣ ತೆಗೆದಿತ್ತು.

 

[t4b-ticker]

You May Also Like

More From Author

+ There are no comments

Add yours