ಹೊಸದುರ್ಗ: ತಾಲೂಕಿನ ಮಾಡದಕೆರೆ ಗ್ರಾಮದ ಸಮೀಪವಿರುವ ಕ್ರಾಸ್ ನಲ್ಲಿ ಲಾರಿಯೊಂದು ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಹಿರಿಯೂರು ಮಾರ್ಗವಾಗಿ ಬರುತ್ತಿರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಂಡಿಗೆ ಪಲ್ಟಿಯಾದ ಪರಿಣಾಮ ಚಾಲಕನ ದೇಹಕ್ಕೆ ಗಂಭೀರ ಗಾಯಗಳಾಗಿ ಚಾಲಕ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ.
ಲಾರಿಯಲ್ಲಿದ್ದ ಮತ್ತೊಬ್ಬನಿಗೆ ಕೈ ಕಾಲು ಮತ್ತು
ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಚಾಲಕನನ್ನು ಚಳ್ಳಕೆರೆ ತಾಲೂಕಿನ ಹುಲ್ಲು ಕುಂಟೆ ಗ್ರಾಮದ 29 ವರ್ಷ ವಯಸ್ಸಿನ ರಂಗಸ್ವಾಮಿ ಎಂದು ಹೇಳಲಾಗಿದ್ದು, ಈ ಬಗ್ಗೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
+ There are no comments
Add yours