ವಾಲ್ಮೀಕಿ ಶ್ರೀ ಮತ್ತು ಆ ಮಕ್ಕಳ ಡಿಎನ್ಎ ಪರೀಕ್ಷೆ ಮಾಡಿಸೋಣ: ಸತೀಶ್ ಜಾರಕಿಹೊಳಿ ಏಕೆ ಹೀಗೆ ಹೇಳಿದರು.

 

ದಾವಣಗೆರೆ:Davanagere: ನಾಯಕ ಸಮಾಜದ ಶಕ್ತಿ ಕೇಂದ್ರವಾಗಿರುವ  ರಾಜನಹಳ್ಳಿ (Rajanhalli) ವಾಲ್ಮೀಕಿ ಪೀಠದ ವಾಲ್ಮೀಕಿ  ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿಗೆ ಮಕ್ಕಳಿದ್ದಾರೆ  ಎಂದು ಕೆಲವರು ಆರೋಪ ಮಾಡಿದ್ದು ಸ್ವಾಮೀಜಿ ಹಾಗೂ ಆ ಮಕ್ಕಳ ಡಿಎನ್‌ಎ ಪರೀಕ್ಷೆ ಮಾಡಿಸೋಣ ಎಂಬುದಾಗಿ ವಾಲ್ಮೀಕಿ ಸಮಾಜದ ನಾಯಕ ಮತ್ತು  ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ  ಸ್ಫೋಟಕ ಹೇಳಿಕೆ ನೀಡುವ ಮೂಲಕ ಎಲ್ಲಾರ ಕಣ್ಣು ಹುಬ್ಬೆರುವಂತೆ ಮಾಡಿದ್ದಾರೆ.
ಹರಿಹರ ತಾಲೂಕು ರಾಜನಹಳ್ಳಿಯ  ಶ್ರೀ ವಾಲ್ಮೀಕಿ ಗುರುಪೀಠದಲ್ಲಿ ಭಾನುವಾರ ಶ್ರೀಮಠ, ಟ್ರಸ್ಟ್, ಗುರುಗಳು, ಧರ್ಮದರ್ಶಿಗಳ ವಿರುದ್ಧ ಗೊಂದಲ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಚಾರ, ಹೇಳಿಕೆಗಳಿಗೆ ಸ್ಪಷ್ಟಿಕರಣ ನೀಡಲು ರಾಜ್ಯ ಮಟ್ಟದ ಸಭೆಯಲ್ಲಿ  ಆಯೋಜಿಸಿದ್ದರು ಈ ಸಭೆಯಲ್ಲಿ  ಮಾತನಾಡಿ, ಸ್ವಾಮೀಜಿ ಹಾಗೂ ಮಕ್ಕಳ  ಡಿಎನ್ಎ ಪರೀಕ್ಷೆ ಕಾನೂನಾತ್ಮಕವಾಗಿ ಮಾಡಿಸಬೇಕಾ ಅಥವಾ ಖಾಸಗಿಯಾಗಿ ಮಾಡಿಸಬೇಕಾ ಎಂಬ ಬಗ್ಗೆ ಚರ್ಚಿಸೋಣ ಎಂದರು.
ಇನ್ನು ಮೂರು ತಿಂಗಳಲ್ಲೇ ಸ್ವಾಮೀಜಿ ಹಾಗೂ ಹೋಗಬೇಕು. ಆ ಮಕ್ಕಳ ಡಿಎನ್‌ಎ ಟೆಸ್ಟ್ ನಡೆದು ಆಗ ಎಲ್ಲವೂ ಸ್ಪಷ್ಟವಾಗಲಿದೆ. ಶ್ರೀ ಪ್ರಸನ್ನಾನಂದ ಸ್ವಾಮೀಜಿ – ಬಹಳ ಸ್ಪಷ್ಟವಾಗಿ ನಿಮ್ಮ ಅನುಮಾನಗಳಿಗೆ ಉತ್ತರ ನೀಡಿದ್ದಾರೆ. ಸ್ವಾಮೀಜಿ ಮದುವೆಯಾಗಿದ್ದಾರೆಂಬ ಆರೋಪದ ಬಗ್ಗೆ ಸ್ವಾಮೀಜಿ ಅದನ್ನು ಅಲ್ಲಗೆಳೆದಿದ್ದಾರೆ. ಆಸ್ತಿ ಪಾಸ್ತಿ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿಸಿದರು.
ಸ್ವಾಮೀಜಿ ಆಪ್ತ ಸಹಾಯಕರ ಬಗ್ಗೆಯೂ ಚರ್ಚೆಯಾಗಿದೆ.ಇಂತಹ ಆರೋಪ, ಪ್ರತ್ಯಾರೋಪ ಗಳೇನೂ ಹೊಸದಲ್ಲ, ಸತ್ಯ ಹರಿಶ್ಚಂದ್ರನ   ಕಾಲದಿಂದಲೂ ಇದೆಲ್ಲಾ ಇದೆ. ಒಳ್ಳೆಯದು ಮಾಡುವುದಕ್ಕೆ ಮುಂದಾದಾಗ ಇಂತಹ ಆರೋಪಗಳೆಲ್ಲವೂ ಸಮುದಾಯವನ್ನು ಪ್ರಗತಿಯತ್ತ ಕೊಂಡೊಯ್ಯ ಬೇಕಷ್ಟೆ ಎ೦ದು ತಿಳಿಸಿದರು.

20 ಕಡೆ ಕೇಸ್ ಹಾಕಿ, ಓಡಾಡಲಿ ಎಲ್ಲೆಡೆ

ಆರೋಪ ಮಾಡಿದವರು ಎಲ್ಲಾ ಕೇಸ್  ದಾಖಲಿಸಿದಂತೆ ಸ್ವಾಮೀಜಿ ಪ್ರತಿ ದೂರು ನೀಡಲು ಕಾನೂನಿನಲ್ಲಿ ಅವಕಾಶ ಇದೆ, ಅಂತವರ ಮೇಲೆ 20 ಕಡೆ ಕೇಸ್ ಹಾಕಿ, ಓಡಾಡಲಿ ಎಲ್ಲಾಕಡೆ, ಸ್ವಾಮೀಜಿ ಕಾರು ಡ್ರೈವರ್  ಜಾತಿ ಬಗ್ಗೆ ಪ್ರಶ್ನೆ ಎದ್ದಿದೆ. ಆದು ಅವರ ವೈಯಕ್ತಿಕ ವಿಚಾರ, ಸ್ವಾಮಿಗಳಾದವರ ಮೇಲೆ ಇಂತಹ ಆರೋಪ ಬ೦ದಿರುವುದು ಇದೇ ಮೊದಲು, ನಾಲ್ಕು ದಶಕಗಳ ಇತಿಹಾಸದಲ್ಲೇ ಇಂತಹ ಆರೋಪ ಮೊದಲ ಸಲ ಕೇಳಿ ಬಂದಿದೆ ಎಂದು ಸತೀಶ ಜಾರಕಿಹೊಳಿ ತಿಳಿಸಿದರು‌.
ಶ್ರೀ ವಾಲ್ಮೀಕಿ ಪೀಠಕ್ಕೆ ಬಂದ ನಂತರ ಸ್ವಾಮೀಜಿ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಯಾವುದೇ ವ್ಯಕ್ತಿಗೂ ಕೆಲಸ ಮಾಡಲು ಇತಿಮಿತಿ ಇದೆ. ಸಾಮಾಜಿಕ ಜಾಲತಾಣದಿಂದ ಸ್ವಾಮೀಜಿಗೆ ಏನೂ ಆಗುವುದಿಲ್ಲ. ನಮ್ಮದು ಇತಿಮಿತಿಯೊಳಗೆ ಇರಬೇಕು. ನಮ್ಮ ಸಮುದಾಯವು ಬೇರೆ ಸಮುದಾಯದವರ ನೋಡಿ ಕಲಿಯಬೇಕು. ಕೆಲವರು ಬೈಯ್ಯುವುದೇ ಕೆಲಸ ಮಾಡಿಕೊಂಡಿರುತ್ತಾರೆ. ಅಂತಹವರ ಬಗ್ಗೆ
ತಲೆ ಕೆಡಿಸಿಕೊಳ್ಳುವಂತಿಲ್ಲ ಎಂದು ಸತೀಶ ಜಾರಕಿಹೊಳಿ  ಕುಟುಕಿದರು.
ಈ ಸಭೆಯಲ್ಲಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಶಾಂತಲಾ ರಾಜಣ್ಣ, ಡಾ.ಜಿ.ರಂಗಯ್ಯ, ಟಿ.ಓಬಳಪ್ಪ, ಡಾ.ಕೆ.ಆರ್.ಪಾಟೀಲ, ಮಲ್ಲಪ್ಪ,  ಕೌಲಗಿ, ಹರ್ತಿಕೋಟೆ ವೀರೇಂದ್ರ ಸಿಂಹ ವೆಂಕಟರಮಣ, ಮಾಲೇನಹಳ್ಳಿ ಮಹೇಶ, ಬಿ, ಚಳುವಳಿ  ರಾಜಣ್ಣ, ವೇಣುಗೋಪಾಲ, ರಾಜಾ ವೆಂಕಟಪ್ಪ ನಾಯಕ, ಬಿ.ಕಾಂತರಾಜ,,ಭೀಮರಾಯಹದ್ದಿನಾಳ, ರಘುವೀರ ನಾಯಕ, ನಂದಕುಮಾರ ಮಾಲಿ ಪಾಟೀಲ, ನಾಗರಾಜಪ್ಪ, ಪನವರ, ರಮೇಶ ಹೊದಿಗೆರೆ, ಪಾಲಯ್ಯ, ರಾಜಶೇಖರ ತಳವಾರ
ಲಿಂಗವ್ವನಾಗತಿಹಳ್ಳಿ ತಿಪ್ಪೇಸ್ವಾಮಿ, ಇತರರಿದ್ದರು.
[t4b-ticker]

You May Also Like

More From Author

+ There are no comments

Add yours