ರಕ್ತವಾಂತಿಯಿಂದ ಧ್ರುವ ನಾರಾಯಣ ಸಾವು ಡಾಕ್ಟರ್ ಹೇಳಿದ್ದೇನು.

 

ಮೈಸೂರು: ಕಾಂಗ್ರೆಸ್ ಪಕ್ಷದ  ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಆರ್​.ಧ್ರುವನಾರಾಯಣ್ ಇನ್ನಿಲ್ಲ. ತೀವ್ರ ರಕ್ತಸ್ರಾವ ಉಂಟಾಗಿ ಮೈಸೂರಿನ ಡಿಆರ್​ಎಂಎಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ವಿಧಿವಶರಾಗಿದ್ದಾರೆ.

ವೈದ್ಯರು ಹೇಳಿದ್ದೇನು..?#Dhruva Narayan’s

ಧ್ರುವನಾರಾಯಣ್​ಗೆ ಅನಾರೋಗ್ಯ ಸುದ್ದಿ ತಿಳಿಯುತ್ತಿದ್ದಂತೆಯೇ ಮೈಸೂರಿನ DRMS ಆಸ್ಪತ್ರೆಯ ವೈದ್ಯ ಡಾ.ಮಂಜುನಾಥ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು.

ಈ ವೇಳೆ ಮನೆಯಲ್ಲಿ ಧ್ರುವನಾರಾಯಣ್ ಮಂಚದಿಂದ ಕೆಳಗೆ ಬಿದ್ದು ರಕ್ತವಾಂತಿ ಮಾಡಿಕೊಂಡು ನೋವಿನಿಂದ ಬಳಲುತ್ತಿದ್ದರು ಎಂದು ವೈದ್ಯ ಡಾ.ಮಂಜುನಾಥ್ ತಿಳಿಸಿದ್ದಾರೆ.

ಧ್ರುವನಾರಾಯಣ್ ರಕ್ತವಾಂತಿ ಮಾಡಿಕೊಂಡು ಸುಮಾರು ಅರ್ಧ ಗಂಟೆಯಾಗಿತ್ತು. ಅವರ ಮನೆಯಿಂದಲೇ ಚಿಕಿತ್ಸೆ ನೀಡಲು ಪ್ರಯತ್ನ ಮಾಡಿದ್ವಿ. ಆದರೆ ಅವರು ಚಿಕಿತ್ಸೆಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಇಂದು ಸುಮಾರು ಬೆಳಗ್ಗೆ 6 ಗಂಟೆ 20 ನಿಮಿಷಕ್ಕೆ ಮತ್ತೆ ಬ್ಲಡ್​ ವಾಮಿಟ್​​ ಮಾಡಿಕೊಂಡರು. ನಂತರ ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ನಂತರ ಆಸ್ಪತ್ರೆಯಲ್ಲೂ ಹೆಚ್ಚಿನ ಚಿಕಿತ್ಸೆಯನ್ನ ನೀಡಲು ಪ್ರಯತ್ನ ಮಾಡಿದ್ವಿ. ಎಷ್ಟೇ ಚಿಕಿತ್ಸೆ ನೀಡಿದರೂ ಧ್ರುವನಾರಾಯಣ್ ಸ್ಪಂದಿಸುತ್ತಿರಲಿಲ್ಲ ಎಂದು ವೈದ್ಯ ಮಂಜುನಾಥ್ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours