ಅಭಿವೃದ್ದಿ ಕಾರ್ಯಗಳೇ ನನ್ನ ಗೆಲುವಿಗೆ ಶ್ರೀರಕ್ಷೆ: ಶಾಸಕ ಟಿ.ರಘಯಮೂರ್ತಿ

 

ಚಳ್ಳಕೆರೆ- ಏ:18: ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ನನ್ನಗೆ ಶ್ರೀರಕ್ಷೆಯಾಗಿ ಮುಂದಿನ ಹ್ಯಾಟ್ರಿಕ್    ಗೆಲುವಿಗೆ ಕಾರಣವಾಗಲಿವೆ ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹೇಳಿದರು.

ಅವರು ತಾಲ್ಲೂಕು ಕಚೇರಿಯಲ್ಲಿ ಬುಧವಾರ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಹ್ಯಾಟ್ರಿಕ್ ವಿಜಯ ದಾಖಲಿಸುವ ನಿಟ್ಟಿನಲ್ಲಿ ಸಾವಿರಾರು ಜನರು ಇಂದು ಸೇರಿದ್ದಾರೆ. ಅವರ ಉತ್ಸಾಹ ಕಂಡು ನಾನು ಮತ್ತೆ ಈ ಕ್ಷೇತ್ರದಿಂದ ಆಯ್ಕೆಯಾಗಿ ಅವರ ಸೇವೆ ಮಾಡಬೇಕು ಎಂದುಕೊಡಿದ್ದೇನೆ. ನಿಮ್ಮಲ್ಲಿರುವ ಉತ್ಸಾಹ ಅಭಿಮಾನ ವಿಶ್ವಾಸ ಪ್ರೀತಿ ಕಂಡು ಹೆಚ್ಚು ಮಾತನಾಡಲು ಸಾಧ್ಯವಾಗುತ್ತಿಲ್ಲ. ಉರಿಯುವ ಕೆಂಡದಂತಹ ಸುಡು ಬಿಸಿಲಿನಲ್ಲೂ ನೀವು ಬಿಸಿಲನ್ನು ಲೆಕ್ಕಿಸದೆ ಸೂರ್ಯನಿಗೆ ಎದೆಯೊಡ್ಡಿ ಪಕ್ಷಕ್ಕೆ ಜಯಕಾರ ಹಾಕುತ್ತಾ ಕಾಂಗ್ರೆಸ್‍ಪಕ್ಷದ ಗೆಲುವಿಗಾಗಿ ಹಂಬಲಿಸುತ್ತಿದ್ದೀರಿ, ನಿಮ್ಮೆಲ್ಲರ ಜಯಕಾರ, ಆರೈಕೆಯೊಂದಿಗೆ ನಾನು ಮತ್ತೊಮ್ಮೆ ಈ ಕ್ಷೇತ್ರದಿಂದ ಶಾಸಕನಾಗಿ ಆಯ್ಕೆಯಾಗುವ ವಿಶ್ವಾಸ ಹೆಚ್ಚುತ್ತಿದೆ ಎಂದರು.
ನೆಹರೂ ವೃತ್ತಕ್ಕೆ ಮೆರವಣಿಗೆ ಆಗಮಿಸಿದ ಸಂದರ್ಭದಲ್ಲಿ ಜೆಸಿಬಿ ಮೂಲಕ ಬೃಹತ್ ಹಾರ ಹಾಕಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಎಐಸಿಸಿ ಕಾರ್ಯದರ್ಶಿ ಮಯೂರ ಜಯರಾಂ, ಶಾಸಕ ಟಿ.ರಘುಮೂರ್ತಿಯವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿ ಪಕ್ಷದ ಮೇಲಿರುವ ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದ್ದೀರಿ, ನಿಮ್ಮೆಲ್ಲರ ಈ ಉತ್ಸಾಹ ಕಂಡರೆ ಶಾಸಕ ಟಿ.ರಘುಮೂರ್ತಿ ಮತ್ತಷ್ಟು ಲೀಡ್‍ನಲ್ಲಿ ಜಯಗಳಿಸುವ ವಿಶ್ವಾಸ ನನಗಿದೆ ಎಂದರು.
ಯುವ ವಾಣಿಜ್ಯೋದ್ಯಮಿ ವೀರೇಂದ್ರಪಪ್ಪಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ಬಿ.ಎನ್.ಮಂಜುನಾಥ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‍ಪೀರ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಗೀತಾನಂದಿನಿಗೌಡ, ನಗರಸಭಾ ಅಧ್ಯಕ್ಷೆ ಸುಮಕ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಪ್ಪ, ಜಿ.ಟಿ.ಶಶಿಧರ, ಹಿರಿಯ ಮುಖಂಡ ಸಿರಿಯಣ್ಣ,  ಗಾಯಿತ್ರಮ್ಮರಘುಮೂರ್ತಿ, ಶಾಂತಮ್ಮ, ಸಿ.ವೀರಭದ್ರಬಾಬು ಮುಂತಾದವರು ಇದ್ದರು.

[t4b-ticker]

You May Also Like

More From Author

+ There are no comments

Add yours